Saturday, February 7, 2026
Homeಹಣಕಾಸುಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ 8ನೇ ಶಾಖೆ ಉದ್ಘಾಟಿಸಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ 8ನೇ ಶಾಖೆ ಉದ್ಘಾಟಿಸಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ

ಕೇಂದ್ರ ಉಕ್ಕು ಮತ್ತು ಬಾರೀ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿರವರು, ಕೇಂದ್ರ ಸಚಿವೆ ಶೋಭ ಕರಾಂದ್ಲಾಜೆರವರು,ಚಲನಚಿತ್ರ ನಟಿ ಶ್ರೀಮತಿ ರುಕ್ಮಿಣಿ ವಸಂತ್, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರಾದ ಟಿ.ಎ.ಶರವಣ ರವರು ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟರಾಜ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಹೆಚ್.ಡಿ.ಕುಮಾರಸ್ವಾಮಿರವರು ಮಾತನಾಡಿ ಸಾಯಿಬಾಬ ಅಪಾರ ಭಕ್ತರಾದ ಶರವಣರವರ ಸಾಯಿ ಗೋಲ್ಡ್ ಪ್ಯಾಲೇಸ್ ಸ್ಥಾಪನೆ ಮಾಡಿದ್ದಾರೆ.

ಜನರಿಗೆ ಅನುಕೂಲವಾಗಿ, ಗ್ರಾಹಕರಿಗೆ ಉತ್ತಮ ಚಿನ್ನಾಭರಣ ಲಭಿಸಬೇಕು ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಗಳಲ್ಲಿ 7ಮಳಿಗೆ ಆರಂಭಿಸಿದ್ದಾರೆ, ಈಗ 8ನೇ ಮಳಿಗೆ ಕನಕಪುರ ರಸ್ತೆಯಲ್ಲಿ ಪ್ರಾರಂಭವಾಗಿದೆ.

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ 500ಕ್ಕೂ ಹೆಚ್ಚು ನೌಕರರು ಕಾರ್ಯ ನಿರ್ವಹಿಸುತ್ತಿದ್ದು ಅವರ ಕುಟುಂಬಗಳಿಗೆ ಆಸರೆಯಾಗಿದ್ದಾರೆ ಎಂದು ಹೇಳಿದರು.

ಟಿ.ಎ.ಶರವಣರವರು ಮಾತನಾಡಿ ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೂಂದು ಕಡೆ ಶಾಪಿಂಗ್ ಮಾಡಲು ಸಂಚಾರ ದಟ್ಟಣಿ ಇಂದ ಒಂದು ದಿನ ವ್ಯರ್ಥವಾಗುತ್ತದೆ.

ಜನರ ಅನುಕೂಲಕ್ಕಾಗಿ 8ನೇ ಶಾಖೆ ಕನಕಪುರ ರಸ್ತೆ ಮಾಡಲಾಗಿದೆ ಮಂಡ್ಯ, ಚನ್ನಪಟ್ಟಣ,ರಾಮನಗರ ಜನತಗೆ ಬಹಳ ಹತ್ತಿರವಾಗುತ್ತದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ ಅವಶ್ಯಕತೆ ತಕ್ಕಂತೆ ಚಿನ್ನ ಖರೀದಿಸಿ.

10ಗ್ರಾಂ ಚಿನ್ನದ ಮೇಲೆ 5ಸಾವಿರ ರಿಯಾತಿ ಹಾಗೂ 1ಕೆ.ಜಿ.ಬೆಳ್ಳಿ ಖರೀದಿಯಲ್ಲಿ 5ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದೆ ಮತ್ತು ಉಳಿತಾಯ ಹೊಡಿಕೆ ಮಾಡದವರಿಗೆ ಮೇಕಿಂಗ್ ಚಾರ್ಜ್ ಇರುವುದಿಲ್ಲ ಮತ್ತು1ಕ್ಯಾರೇಟ್ ಡೈಮಂಡ್ ಖರೀದಿಯಲ್ಲಿ 10ಸಾವಿರ ಡಿಸ್ಕೌಂಟ್ ಇರುತ್ತದೆ ಫ್ರೆಬವರಿ 10ರವರಗೆ ಮಾತ್ರ ಈ ಯೋಜನೆ ಇರುತ್ತದೆ.

ಪಾರಂಪಾರಿಕ ಶೈಲಿ ಮತ್ತು ಟೆಂಪಲ್ ಶೈಲಿ ನವನವೀನ ಶೈಲಿಯ ಚಿನ್ನಾಭರಣ ಲಭ್ಯವಿದೆ ಎಂದು ಹೇಳಿದರು.

ಬಿಗ್ ಬಾಸ್ ವಿಜೇತರಾದ ಗಿಲ್ಲಿ ನಟರಾಜ್ ಬಿಗ್ ಬಾಸ್ ಸ್ಪರ್ಧಿಗಳಾದ ರಕ್ಷಿತಾ, ಅಶ್ವಿನಿ ಗೌಡ, ಕಾವ್ಯ, ರಘು, ಧನುಷ್ ಗೌಡ, ಸ್ಪಂದನ ಉಪಸ್ಥಿತರಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!