Kadur; ತಾಲೂಕಿನ ಅಂಚೆ ಚೋಮನಹಳ್ಳಿ ಗ್ರಾಮದ ಬಸವನಹಳ್ಳಿ ದಿಬ್ಬ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ಒಂದೂವರೆ ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ. ಛತ್ತೀಸ್ ಗಡ ಮೂಲದ ವ್ಯಕ್ತಿ ಬೆಂಗಳೂರಿನಿಂದ ಕಡೂರು ಮಾರ್ಗವಾಗಿ ಕಾರಲ್ಲಿ ಸಂಚರಿಸುತ್ತಿದ್ದಾಗ ಕಡೂರು ಬಳಿ ಇರುವ ಬಸವನಹಳ್ಳಿ ದಿಬ್ಬ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಸಿಬ್ಬಂದಿ ವಾಹನ ತಪಾಸಣೆ ನಡೆಸಿದ್ದಾರೆ.

ಈ ವೇಳೆ ಬ್ಯಾಗ್ನಲ್ಲಿ ಹಣ ಇರೋದು ಪತ್ತೆಯಾಗಿದೆ. ಸೂಕ್ತ ದಾಖಲೆ ಇಲ್ಲವೆಂದು ತಿಳಿದು ಪೊಲೀಸರು ನಿಯಮಾನುಸಾರ ಈ ಹಣವನ್ನ ವಶಕ್ಕೆ ಪಡೆದಿದ್ದಾರೆ. ಕಡೂರು psi ನವೀನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪೊಲೀಸ್ ಸಿಬ್ಬಂದಿ ಸುರೇಶ,ಭಾರತೇಶ್, ಚಂದ್ರು ಹಾಗೂ ವಿನಾಯಕ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ರು.
