Advertisement

Homeಇತರೆಸರಿಯಾದ ವ್ಯವಸ್ಥೆ ಇಲ್ಲದ ಮೇಲೆ ಸಾರ್ವಜನಿಕ ಆಸ್ಪತ್ರೆಗಳನ್ನು ಮುಚ್ಚಲಿ: ಎಚ್.ಡಿ.ರೇವಣ್ಣ

ಸರಿಯಾದ ವ್ಯವಸ್ಥೆ ಇಲ್ಲದ ಮೇಲೆ ಸಾರ್ವಜನಿಕ ಆಸ್ಪತ್ರೆಗಳನ್ನು ಮುಚ್ಚಲಿ: ಎಚ್.ಡಿ.ರೇವಣ್ಣ

ಹಾಸನ: ರಾಜ್ಯಾದ್ಯಂತ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುತ್ತಿದೆ ಅದರಲ್ಲೂ ಹಾಸನ ಜಿಲ್ಲೆಯಲ್ಲೂ ಮರಣ ಮೃದಂಗ ಜಾಸ್ತಿ ಕೇಳಿ ಬರುತ್ತಿದ್ದಂತೆ ಶಾಸಕ ಎಚ್.ಡಿ. ರೇವಣ್ಣ ಅವರು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೃದಯಾಘಾತಗಳು ಹೆಚ್ಚುತ್ತಿದ್ದರೂ ಜಿಲ್ಲಾಸ್ಪತ್ರೆಯಲ್ಲಿ ಪರಿಣಿತ ವೈದ್ಯರಿಲ್ಲ, ತೊಂದರೆಗೊಳಗಾದ ಜನ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದರು

ಹಾಗೆ ಸರಿಯಾದ ವ್ಯವಸ್ಥೆ ಇಲ್ಲದ ಮೇಲೆ ಸಾರ್ವಜನಿಕ ಆಸ್ಪತ್ರೆಗಳನ್ನು ಮುಚ್ಚುವುದೇ ಒಳ್ಳೆಯದು, ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ ನಾಡಿಬಡಿತ ಪರೀಕ್ಷಿಸಲು 2-3 ಲಕ್ಷ ರೂ. ಪೀಕಲಾಗುತ್ತದೆ, ಬಡಜನ ಹಣವನ್ನು ಹೇಗೆ ಹೊಂದಿಸಿಯಾರು ಎಂದು ರೇವಣ್ಣ ಕಿಡಿ ಕಾರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!