ಚಿಕ್ಕಮಗಳೂರು: ಕಳೆದ ವಾರ ನಾಲ್ಕು ದಿನದ ಅಂತರದಲ್ಲಿ ಎನ್ ಆರ್ ಪುರ ತಾಲೂಕಿನಲ್ಲಿ ಎರಡು ಜೀವಗಳನ್ನ ಬಲಿ ಪಡೆದಿದ್ದ ಪುಂಡಾನೆಯನ್ನು ಮಂಗಳವಾರ ಕಡಬಗೆರೆ ಸಮೀಪ ಬಿಳುಕೊಪ್ಪ ಅರಣ್ಯ ಪ್ರದೇಶದಲ್ಲಿ ಯಶಸ್ವಿಯಾಗಿ ಕಾರ್ಯಚರಣೆಯಲ್ಲಿ ಸೆರೆ ಹಿಡಿಯಲಾಗಿತ್ತು.
ಈ ಕಾರ್ಯಚರಣೆಗಾಗಿ ಸಕ್ರೆಬೈಲಿನಿಂದ 9 ಕಮ್ಕಿ ಆನೆಗಳನ್ನ ಕರೆಸಿ ಶಿವಮೊಗ್ಗ ಹಾಗೂ ಅರೇಹಳ್ಳಿಯಿಂದ ಬಂದಿದ್ದ ಅರವಳಿಕೆ ತಜ್ಞರು ಭಾಗವಹಿಸಿ ಯಶಸ್ವಿಯಾಗಿ ಕಾರ್ಯಚರಣೆ ನಡೆಸಿದ್ದರು. ಆನೆಯ ಚಲನವಲನ ಗುರುತಿಸಿ ಪುಂಡಾನೆಗೆ ಗುರಿಯಿಟ್ಟು ಅರವಳಿಕೆ ಹೊಡೆದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
