ಮೂಡಿಗೆರೆ: ಪಟ್ಟಣದ ಬೀಜುವಳ್ಳಿಯಲ್ಲಿನ ಶಾಡೋಫ್ಯಾಕ್ಸ್ ಸಂಸ್ಥೆ ಉದ್ಯೋಗಿ ಮಿತ್ರರು ಆಯುಧ ಪೂಜೆ ಕಾರ್ಯಕ್ರಮ ಆಚರಿಸಿದರು.
ಹೌದು ಇದೇನಪ್ಪ ಎಲ್ಲ ಮಾಡೋ ಪೂಜೆನೆ ಅಂತೀರಾ.. ಇರಬಹುದು ಕೆಲವು ಸಂಸ್ಥೆಗಳಲ್ಲಿ ಒಂದಿಷ್ಟು ಹಬ್ಬ ಹರಿದಿನಗಳಿಗೆ ಆರ್ಥಿಕ ಸಹಕಾರ ಕೊಡೊ ಸಂಸ್ಥೆಗಳು ಇವೆ.. ಆದರೂ ನಮ್ಮ ವಾಹನಗಳು ನಮಗೆ ದೇವರು ಹಾಗಾಗಿ ಪೂಜೆ ಕಾರ್ಯ ನಮ್ಮ ಒಗ್ಗಟ್ಟು ಮತ್ತಷ್ಟು ಹೆಚ್ಚುತ್ತೆ ಅಂತಾರೆ ಇಲ್ಲಿನ ಹುಡುಗರು.

ಖಂಡಿತ ಆನ್ಲೈನ್ ಶಾಪಿಂಗ್ ದೇಶದ ಉದ್ದಗಲಕ್ಕೂ ಹೆಸರು ಮಾಡಿದ್ದೂ.. ಗ್ರಾಹಕರು ಮನೆಯಲ್ಲಿ ಮೊಬೈಲ್ ಮೂಲಕ ತಮಗಿಷ್ಟವಾದ ವಸ್ತುಗಳನ್ನು ಆರ್ಡರ್ ಮಾಡಿಕೊಳ್ಳುತ್ತಾರೆ ಅಂಥ ವಸ್ತುಗಳನ್ನು ಸರಿಯಾದ ಸಮಯಕ್ಕೆ ಮನೆ ಬಾಗಿಲಿಗೆ ತಲುಪಿಸಿ ರಾಷ್ಟ್ರದ ಹಾಗೂ ನಿಮ್ಮ ಸಮಯ.ಉಳಿಸುವ ಇಂತಹ ಹುಡುಗರು ನಿಜಕ್ಕೂ ಗ್ರೇಟ್.. ಸೊ ಅಭಿನಂದನೆಗಳು

ನಾವೆಲ್ಲರೂ ಒಂದೇ ಸಂಸ್ಥೆ ಯಲ್ಲಿ ಕೆಲಸ ಮಾಡಿ ನಮ್ಮ ಮನೆಯ ಕಷ್ಟ ಸುಖಗಳಿಗೆ ಸ್ಪಂದಿಸುವ ನಮಗೆ ನಮ್ಮ ಸಾರಥಿಗಳು ಪ್ರಮುಖ ಪಾತ್ರ ವಹಿಸುತ್ತವೆ..ಅಂತಃ ವಾಹನಗಳನ್ನು ನಾವೆಲ್ಲರೂ ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಪೂಜಿಸಿದರೆ ಉತ್ತಮ ಎಂಬ ಉದ್ದೇಶದಿಂದ ಆಯುಧ ಪೂಜೆ ಹಿನ್ನಲೆ ಹಿಂದೆ ಆಯುಧ ಪೂಜಿಸಿ ಯುದ್ಧ ಗಳನ್ನ ಗೆದ್ದ ಪ್ರತಿತಿ ಇದ್ದು ರಾಜರು ಅಸ್ತ್ರ ಪೂಜೆ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ನಮ್ಮ ಕಷ್ಟ ಕಾರ್ಪಣ್ಯ ಯುದ್ಧ ಗೆಲ್ಲಲು ನಾವೆಲ್ಲರೂ ಸೇರಿ ನಮ್ಮ ಸಂಸ್ಥೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.. ಎಂದು ಇಲ್ಲಿನ ಉದ್ಯೋಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಮ್ಯಾನೇಜರ್ ಸಂಪತ್ ಗೌಡ. ಅಮರೇಶ್. ಅಮೃತೇಶ್. ಜೀವನ್. ನಟೇಶ್. ಅಖಿಲ್. ಮುಂತಾದವರು ಇದ್ದರು
