Wednesday, March 25, 2026
Homeಜಿಲ್ಲಾಸುದ್ದಿಶೃಂಗೇರಿ: ತಪ್ಪಿದ ಭಾರೀ ದುರಂತ: ತುಂಗಾ ನದಿ ಪಾಲಾಗುತ್ತಿದ್ದ ಲಾರಿ ಅದೃಷ್ಟವಶತ್ ಪಾರು! Video

ಶೃಂಗೇರಿ: ತಪ್ಪಿದ ಭಾರೀ ದುರಂತ: ತುಂಗಾ ನದಿ ಪಾಲಾಗುತ್ತಿದ್ದ ಲಾರಿ ಅದೃಷ್ಟವಶತ್ ಪಾರು! Video

ಶೃಂಗೇರಿ: ತುಂಗಾ ನದಿ ಪಾಲಾಗುತ್ತಿದ್ದ ಲಾರಿ ಅದೃಷ್ಟವಶತ್ ಪಾರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 169ರ ಉಂಬಳಕೆರೆ ಬಳಿ ನಡೆದಿದೆ. ಕೂದಲೆಳೆಯಲ್ಲಿ ತಪ್ಪಿದ ಭಾರೀ ದುರಂತ

ಹೌದು .. ಲಾರಿ ಚಾಲಕ, ಓರ್ವ ವಿದ್ಯಾರ್ಥಿ ಪ್ರಾಣಪಾಯದಿಂದ ಬಚಾವ್ ಆಗಿದ್ದು ಬಸ್ ಇಲ್ಲದ ಹಿನ್ನೆಲೆ ಲಾರಿ ಏರಿ ಬರುತ್ತಿದ್ದ ವಿದ್ಯಾರ್ಥಿ ಲಾರಿ ಸಮೇತ ನದಿ ಪಾಲಾಗುತ್ತಿದ್ದೂ ಆದರೂ ಅದೃಷ್ಟವಶತ್ ಜೋರು ಮಳೆಯ ನಡುವೆ ಇಬ್ಬರ ಜೀವ ಉಳಿದಿದೆ.

ಕಾರ್ಕಳದಿಂದ ಶೃಂಗೇರಿ ಕಡೆ ಬರುತ್ತಿದ್ದ ಪಾರ್ಸೆಲ್ ಲಾರಿ ಈ ವೇಳೆ ಕಿರಿದಾದ ರಸ್ತೆಯಲ್ಲಿ ಸೈಡ್ ಕೊಡುವಾಗ ಪಕ್ಕಕ್ಕೆ ಸರಿದಾಗ ಪಕ್ಕದಲ್ಲೇ ಇದ್ದ ತುಂಗಾ ನದಿ ಪಾಲಾಗುತ್ತಿದ್ದ ಅದೃಷ್ಟವಶತ್ ಬದುಕಿದ್ದಾರೆ.

https://www.facebook.com/share/p/19HEzVJcoD

ಎಷ್ಟೇ ಮನವಿ ಸಲ್ಲಿಸಿದ್ರು ಈ ದಾರಿಯನ್ನು ಯಾರೂ ಸರಿಮಾಡುತ್ತಲ್ಲ ಇಲ್ಲಿಯ ಕಿರಿದಾದ ರಸ್ತೆಯೇ ಅಪಘಾತಕ್ಕೆ ಕಾರಣ ಎಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏನೋ ಅದೃಷ್ಟದಿಂದ ಉಳಿದಿದ್ದಾರೆ ಏನಾದರೂ ದೊಡ್ಡ ಅಪಾಯವಾದರೆ ಅಷ್ಟೇ ಇಲ್ಲಿ ಗಮನಕೊಡುತ್ತಾರೋ ಎಂದು ಸ್ಥಳೀಯರು ಕಿಡಿ ಕಾರಿದರು. ನೋಡೋಣ ಈಗಲಾದರೂ ಅಲ್ಲಿನ ಶಾಸಕರು ಎಚ್ಚೆತ್ತುಕೊಂಡು ದಾರಿಯನ್ನು ಸರಿಮಾಡಿಸುತ್ತಾರೋ ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!