Monday, August 10, 2026
Homeವನ್ಯ ಜೀವಿಮುದ್ರಾಡಿಯಲ್ಲಿ ಉರುಳಿಗೆ ಬಿದ್ದ ಚಿರತೆ: ಅರಣ್ಯ ಇಲಾಖೆಯಿಂದ ರಕ್ಷಣೆ

ಮುದ್ರಾಡಿಯಲ್ಲಿ ಉರುಳಿಗೆ ಬಿದ್ದ ಚಿರತೆ: ಅರಣ್ಯ ಇಲಾಖೆಯಿಂದ ರಕ್ಷಣೆ

Telegram Group
Join Now

ಹೆಬ್ರಿ: ಉಡುಪಿಯ ಹೆಬ್ರಿ ಸಮೀಪದ ಮುದ್ರಾಡಿಯಲ್ಲಿ ಚಿರತೆಯೊಂದು ಸೆರೆಯಾಗಿದೆ. ಅರಣ್ಯ ಪ್ರದೇಶದಲ್ಲಿ ಹಂದಿಗೆ ಇರಿಸಲಾಗಿದ್ದ ಉರುಳಿಗೆ ಸಿಲುಕಿ ಬಿದ್ದಿದೆ.

ಉರುಳು ಸುತ್ತಿದ ಗೂಟದೊಂದಿಗೆ ಒದ್ದಾಡುತ್ತಿರುವ ಚಿರತೆಯನ್ನು ಸ್ಥಳೀಯರು ಗಮನಿಸಿದ್ದಾರೆ. ಗಾಯಗೊಂಡ ಚಿರತೆ ಆದ್ದರಿಂದ ಯಾರೂ ಸಮೀಪಕ್ಕೆ ಹೋಗಿಲ್ಲ. ಬಳಿಕ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಅರವಳಿಕೆ ಕೊಟ್ಟು, ಚಿರತೆಯನ್ನು ರಕ್ಷಿಸಿದ್ದಾರೆ. ಪಶು ವೈದ್ಯರಾದ ಡಾಕ್ಟರ್ ಮೇಘನಾ, ಡಾಕ್ಟರ್ ಯಶಸ್ವಿನಿ ಮತ್ತು ಉಚ್ಚು ಟ್ರಸ್ಟ್ ನ ಅಕ್ಷಯ್ ಶೇಟ್ ಈ ಕಾರ್ಯಾಚರಣೆಯಲ್ಲಿ ನೆರವು ನೀಡಿದರು.

ರಕ್ಷಿಸಲ್ಪಟ್ಟ ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments