ಪಡುಬಿದ್ರಿ: ತಮ್ಮ ವಿಶಿಷ್ಟ ಮಾತುಗಳಿಂದ ಮನೆ ಮಾತಾಗಿರುವ , ಈ ಬಾರಿಯ ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿಯನ್ನು ಊರವರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
ಬಿಗ್ ಬಾಸ್ ರನ್ನರ್ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ರಕ್ಷಿತಾ ಊರಿಗೆ ಆಗಮಿಸಿದರು. ಹುಟ್ಟೂರು ಉಚ್ಚಿಲಕ್ಕೆ ಆಗಮಿಸುವ ಮುನ್ನ ಹೆಜಮಾಡಿ ಕಾಲ್ ಗೇಟ್ ಬಳಿ ಸ್ಥಳೀಯರು ಮತ್ತು ಊರವರು ರಕ್ಷಿತಾ ಗೆ ಸ್ವಾಗತ ಕೋರಿದರು. ಆಕೆ ಆಗಮಿಸುತ್ತಿದ್ದಂತೆ ಬಿಗ್ ಬಾಸ್ ರಕ್ಷಿತಾಗೆ ಜೈ ಎಂದು ಉದ್ಘಾರ ಮಾಡಿದರು.
ತೆರೆದ ವಾಹನದಲ್ಲಿ ನಿಂತು ರಕ್ಷಿತಾ ಜನರತ್ತ ಕೈಬೀಸಿ ದರು. ಅವರು ಆಗಮಿಸುವುದಕ್ಕೂ ಮುನ್ನ ಊರವರು ರಸ್ತೆ ಬದಿ ಕಾಯುತ್ತಿದ್ದರು. ರಕ್ಷಿತಾ ಜೊತೆ ಸೆಲ್ಫಿಗಾಗಿ ಊರವರು ಮುಗಿಬೀಳುವ ದೃಶ್ಯ ಕಂಡಬಂತು.
