ಚಿಕ್ಕಮಗಳೂರು : ಪೊಲೀಸರ ಎದುರೇ ಯುವಕನೊಬ್ಬ ಕತ್ತು ಕೊಯ್ದುಕೊಂಡ ಘಟನೆ ಚಿಕ್ಕಮಗಳೂರು ಪೊಲೀಸ್ ಸ್ಟೇಷನ್ ಎದುರು ನಡೆದಿದೆ.
ಹೌದು .. ಪುನೀತ್ (ಅಪ್ಪು) ಕತ್ತು ಕೊಯ್ದುಕೊಂಡ ಯುವಕನಾಗಿರುತ್ತಾನೆ. ಅಪ್ಪ-ಅಮ್ಮ-ತಂಗಿ ಎಲ್ಲರನ್ನೂ ಕಳೆದುಕೊಂಡಿರುತ್ತಾನೆ.

ಅಪ್ಪ-ಅಮ್ಮ ಮಾಡಿದ 15/20 ಸೈಟಿನ 2 ಮನೆಗಾಗಿ ಅತ್ತೆ ಜೊತೆ ಜಗಳ ಮಾಡಿಕೊಂಡಿದ್ದು ನಿಮ್ಮ ಅಪ್ಪ ನಮ್ಮ ಬಳಿ ಹಣ ಪಡೆದಿದ್ದಾನೆ ಎಂದು ಮನೆ ನೀಡಲು ನಿರಾಕರಿಸಿದ ಅಪ್ಪನ ಅಕ್ಕ ಹೀಗಾಗಿ ಅವರ ಜೊತೆ ಜಗಳವಾಡಿಕೊಂಡು ನ್ಯಾಯಕ್ಕಾಗಿ ಪೊಲೀಸರ ಎದುರು ಕತ್ತು ಕೊಯ್ದುಕೊಂಡ ಯುವಕ
ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಪುನೀತ್ ಗೆ 11 ಹೊಲಿಗೆ ಹಾಕಿದ್ದು ಹಾಗೆ ಆ ಕೂಡಲೇ ಆಸ್ಪತ್ರೆಯಿಂದ ಹೋಗಿರುವ ಯುವಕ ಪುನೀತ್
ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.
