Thursday, April 2, 2026
Homeಕ್ರೈಮ್ಹಾಸನ: ನನ್ನ ಮೇಲೆ ಸುಮೊಟೋ ಕೇಸ್ ಹಾಕಲು ಭಾಷಣದಿಂದ ಏನಾದ್ರೂ ಗಲಾಟೆ, ಗಲಭೆ ಆಗಿದಿಯಾ: ಪ್ರಮೋದ್‌...

ಹಾಸನ: ನನ್ನ ಮೇಲೆ ಸುಮೊಟೋ ಕೇಸ್ ಹಾಕಲು ಭಾಷಣದಿಂದ ಏನಾದ್ರೂ ಗಲಾಟೆ, ಗಲಭೆ ಆಗಿದಿಯಾ: ಪ್ರಮೋದ್‌ ಮುತಾಲಿಕ್

ಹಾಸನ : ಇತ್ತೀಚಿಗೆ ಸಕಲೇಶಪುರ ನಗರದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದೆ ಎಂದು ಹೇಳಿ ಪೊಲೀಸರು ನನ್ನ ಮೇಲೆ‌ ಸುಮೋಟೋ ಕೇಸ್ ದಾಖಲು ಮಾಡಿದ್ರು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ

ಹೌದು .. ಇಂದು ಸಕಲೇಶಪುರದಲ್ಲಿ ಮಾತನಾಡಿದ ಅವರು, ನನಗೆ ಇದು ಗೊತ್ತಾಗದೆ ಅಟೆಂಡ್ ಆಗಿರಲಿಲ್ಲ, ವಾರೆಂಟ್ ಆಗಿತ್ತು, ಇವತ್ತು ರೀಕಾಲ್ ಆಯ್ತು ನನ್ನ ಮೇಲೆ ಸುಮೋಟೋ ಕೇಸ್ ಹಾಕಲು ನನ್ನ ಭಾಷಣದಿಂದ ಏನಾದರೂ ಗಲಾಟೆ, ಗಲಭೆ, ತೊಂದರೆ ಆಗಿದಿಯಾ ಪೊಲೀಸರು ವಿನಾಕಾರಣ ಮೂರ್ಖತನದ ಕೆಲಸ ಮಾಡ್ತಿದ್ದಾರೆ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಸುಮೋಟೋ ಕೇಸ್ ಹಾಕಿದ್ದಾರೆ ಯಾವುದೇ ಗಲಾಟೆ, ಗಲಭೆ ಇಲ್ಲಾ, ನಾನು ಯಾವುದೇ ಪ್ರಚೋದನಕಾರಿ ಭಾಷಣ ಮಾಡಿಲ್ಲ ಹಿಂದೂ ಯುವತಿಯರ ರಕ್ಷಣೆ, ಗೋಹತ್ಯೆ, ಮತಾಂತರ ತಡೆಯುವುದದ ಬಗ್ಗೆ ಮಾತನಾಡಿದರೆ ಪ್ರಚೋದಕಾರಿ ಭಾಷಣ ಆಗುತ್ತಾ ಎಂದು ಪ್ರಶ್ನೆ ಮಾಡಿದರು

ಅದೇ ರೀತಿ ಬಾಂಗ್ಲಾದೇಶಿ ಬೇಟಾ, ಬೇಟಿಗಳು ಇವತ್ತು ಏನು ಕೆಲಸ ಮಾಡುತ್ತಿದ್ದಾರೆ ಈ ಪೊಲೀಸರು ಕತ್ತೆ ಕಾಯುತ್ತಿದ್ದಾರಾ ಅವರ ಕೆಲಸವನ್ನು ನಾನು ಜನರಿಗೆ ಹೇಳಿದ್ರೆ ಇದು ಪ್ರಚೋದನಕಾರಿನಾ ಪೊಲೀಸ್ ಇಲಾಖೆಯವರು ಬಹಳ ಗಂಭೀರವಾಗಿ ಯೋಚನೆ ಮಾಡಬೇಕು ನೀವು ಈ ದೇಶದಲ್ಲಿ ಬದುಕಬೇಕಾಗಿದೆಸಿದ್ದರಾಮಯ್ಯ, ಯಡಿಯೂರಪ್ಪ ಅವರ ಮಾತು ಕೇಳಿ ಬದುಕುವ ಆಗಿಲ್ಲಕಾನೂನು ಏನು ಹೇಳುತ್ತೆ ಅದಕ್ಕೆ ಸಂಬಂಧಿಪಟ್ಟಂತೆ ಯೋಚನೆ ಮಾಡಿ ಮಾಡಬೇಕುಕಾಂಗ್ರೆಸ್ ಅಂತು ಹಿಂದೂ ವಿರೋಧಿಅವರಿಗೆ ದೇಶ, ಧರ್ಮ, ಹಿಂದೂಗಳು ಬೇಕಾಗಿಲ್ಲ ಅವರಿಗೆ ಓಟು, ಅಧಿಕಾರದ ದಾಹಿಗಳಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇವತ್ತು ಸಕಲೇಶಪುರದ ಕೋರ್ಟ್‌ಗೆ ಹಾಜರಾಗಿ ರೀಕಾಲ್ ಮಾಡಿಸಿಕೊಂಡಿದ್ದೇನೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!