ಮೂಡಿಗೆರೆ ಜೆಸಿಐ ವತಿಯಿಂದ ಮೂಡಿಗೆರೆ ಪಟ್ಟಣವನ್ನು ಪ್ರತಿನಿತ್ಯ ಸ್ವಚ್ಛವಾಗಿಡುವ ಗೌರವಾನ್ವಿತ ಎಲ್ಲಾ ಪೌರಕಾರ್ಮಿಕರಿಗೂ ಅವರ ಆರೋಗ್ಯ ದೃಷ್ಟಿಯಿಂದ ಉತ್ತಮ ಗುಣಮಟ್ಟದ ಸ್ಟೀಲ್ ವಾಟರ್ ಬಾಟಲ್ ಉಪಯೋಗಿಸಲು ಉಚಿತವಾಗಿ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ನೀಲಮ್ ಟೆಕ್ಸ್ಟೈಲ್ ನ ಮಾಲೀಕರಾದ ದಿನೇಶ್ ಅವರು ಭಾಗವಹಿಸಿ ಸ್ಟೀಲ್ ವಾಟರ್ ಬಾಟಲ್ ಅನ್ನು ಎಲ್ಲಾ ಪೌರಕಾರ್ಮಿಕರಿಗೂ ವಿತರಿಸಿದರು .ಈ ವೇಳೆ ಜೆಸಿ ತೇಜಸ್ವಿ, ಜೆಸಿ ವಿಜಯಕುಮಾರ್, ಜೆಸಿ ಜಗತ್ ವಲಯ ಉಪಾಧ್ಯಕ್ಷರು ಸುದೀಪ್ ತ್ರಿಪುರ, ಜೆ ಸಿ ಕಾರ್ಯದರ್ಶಿ ಸದಸ್ಯರಾದ ಪ್ರೇಮ ಪುಣ್ಯಮೂರ್ತಿ ಭಾಗವಹಿಸಿದ್ದರು.

ನಮ್ಮ ಜೆಸಿಐ ರಾಷ್ಟ್ರೀಯ ಅಧ್ಯಕ್ಷರವರ ಕನಸಿನ ಯೋಜನೆಯಾದ “Sustainable Sipping” ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು
