ಚಿಕ್ಕಮಗಳೂರು : ಪತ್ನಿಯೊಂದಿಗೆ ಅಂಗಡಿ ಮುಂದೆ ಕುಳಿತ್ತಿದ್ದ ಪತಿ ಮೇಲೆ ಹಲ್ಲೆ ನಡೆಸುತ್ತಿದ್ದು ಈ ವೇಳೆ ಬಿಡಿಸಲು ಬಂದ ಸಹೋದರನ ಮೇಲೂ ಅಟ್ಯಾಕ್ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಕಲ್ಯಾಣ ನಗರದಲ್ಲಿ ನಡೆದಿದೆ.
ಹೌದು .. ತನ್ನದೆ ಅಂಗಡಿಯ ಮುಂದೆ ಶಾಪ್ ಕ್ಲೋಸ್ ಮಾಡಿ ಕುಳಿತು ಪತ್ನಿಯೊಂದಿಗೆ ಮಾತನಾಡುತ್ತಿದ್ದ ಭನರಾಮ್ ಈ ವೇಳೆ ರಸ್ತೆಯಲ್ಲಿ ಬಂದ ಆರು ಜನ ಯುವಕರಿಂದ ಕಾರಣವಿಲ್ಲದೆ ಹಲ್ಲೆ ನಡೆಸಿದ್ದಾರೆ.
ಮಹಿಳೆಯೊಂದಿಗೆ ಏಕೆ ಕುತಿದ್ದಿಯಾ ಎಂದು ಪ್ರಶ್ನೆಗೈದ ಯುವಕರು ಹೆಂಡತಿಯೊಂದಿಗೆ ಮಾತನಾಡುತ್ತಿದ್ದೇನೆ ಏಕೆ ಎಂದ ಭನರಾಮ್ ಈ ವೇಳೆ ಇದ್ದಕ್ಕಿದ್ದಂತೆ ಏಕಾಏಕಿ ಹಲ್ಲೆ ನಡೆಸಿದ ಗುಂಪು ಭನರಾಮ್ ಹಾಗೂ ಜಗಳ ಬಿಡಿಸಲು ಬಂದ ಸಹೋದರ ಗುಣರಾಮ್ ಮೇಲೂ ಹಲ್ಲೆ ನಡೆಸಿದ ಪುಂಡರ.
ಜಗದಾಂಭ ಗ್ಲಾಸ್ ಅಂಡ್ ಪ್ಲೈವುಡ್ ಅಂಗಡಿ ನಡೆಸುವ ಭನರಾಮ್ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹಲ್ಲೆ ಮಾಡಿದ ಚೇತನ್, ಸುಹಾಸ್, ಜೀಶಾಂತ್ ಮೇಲೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
