ಜಯಪುರ: ಕೊಪ್ಪ ತಾಲೂಕಿನ ಮೇಗುಂದ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಡ್ಡೆಯಲ್ಲಿ ಶಾಲಾ ಶಿಕ್ಷಕ ರಮೇಶ್ ನಾಯಕ್ ಹಾಗೂ ಆತನ ಹೆಂಡತಿ ಸುಶೀಲ ಎಂಬುವವರಿಂದ ಶಾಲೆಯಲ್ಲಿ ಗಲಾಟೆ ನಡೆದಿದ್ದು ಇದರಿಂದ ಇತ್ತ ಮಕ್ಕಳಿಗೂ ಕಿರಿಕಿರಿ, ಶಾಲಾ ಇತರ ಶಿಕ್ಷಕರಿಗೂ ಕಿರಿಕಿರಿ ಉಂಟಾಗಿದೆ.
ಹಲವು ಭಾರೀ ಸಂಧಾನ ಸಭೆ ನಡೆಸಿದರು ಯಾವುದೇ ಪ್ರಯೋಜನ ಇಲ್ಲ. ಮಕ್ಕಳ ಬ್ಯಾಗಿಗೆ ಉಳಿಯುವ ಶಿಕ್ಷಕ ಹೆಡ್ ಮಾಸ್ಟರ್ ಹಾಗೂ ಇತರ ಶಿಕ್ಷಕಿಯರ ಮೇಲೆ ಹಲ್ಲೆ ಮಾಡಲು ಹೋಗುವ ಶಿಕ್ಷಕನ ಹೆಂಡತಿ. ಇದರಿಂದ ರೊಚ್ಚಿಗೆದ್ದ ಪೋಷಕರು ಶಿಕ್ಷಕನ ಹೆಂಡತಿಗೆ ಶಾಲೆಯಲ್ಲಿ ಏನು ಕೆಲಸ ಎಂದು ಕಿರಿಕ್ ಶಿಕ್ಷಕ ಹಾಗೂ ಆತನ ಹೆಂಡತಿ ಮೇಲೆ ಆಕ್ರೋಶ ಹೊರಹಾಕಿದರು.
ಇತ್ತೀಚೆಗಷ್ಟೇ ಸರ್ಕಾರದಿಂದ ಆದೇಶವಾಗಿ ಶಾಲೆಗೆ ಬಂದಿದ್ದ ಶಿಕ್ಷಕ ಶಾಲಾ ಹತ್ತಿರದಲ್ಲೇ ಕೊಠಡಿ ವ್ಯವಸ್ಥೆ ಮಾಡಿ ಕೊಟ್ಟಿದ್ದ ಗ್ರಾಮಸ್ಥರು ಹೀಗಾಗಿ ಹತ್ತಿರದಲ್ಲೇ ಕೊಠಡಿ ಇರುವುದರಿಂದ ಶಾಲೆಗೆ ಬಂದು ಆಗಾಗ ಕಿರಿಕ್ ಮಾಡುವ ಶಿಕ್ಷಕನ ಹೆಂಡತಿ ಇದರಿಂದ ಬೇಸತ್ತ ಮಕ್ಕಳು ಶಿಕ್ಷಕ ಹಾಗೂ ಆತನ ಹೆಂಡತಿ ಮೇಲೆ ದೂರು ನೀಡಿದ್ದಾರೆ.
