Monday, August 4, 2025
!-- afp header code starts here -->
Homebig breakingದ್ವಿಚಕ್ರ ವಾಹನದಲ್ಲಿ ಐವರ ಸಂಚಾರ - ಬಸ್‌ ಗುದ್ದಿದ ರಭಸಕ್ಕೆ ಕುಟುಂಬವೇ ಬಲಿ..!

ದ್ವಿಚಕ್ರ ವಾಹನದಲ್ಲಿ ಐವರ ಸಂಚಾರ – ಬಸ್‌ ಗುದ್ದಿದ ರಭಸಕ್ಕೆ ಕುಟುಂಬವೇ ಬಲಿ..!

ಯಾದಗಿರಿ : ಬೈಕ್‌ಗೆ ಹಿಂಬದಿಯಿಂದ ಬಸ್‌ ಡಿಕ್ಕಿಯಾಗಿ ಐವರು ಮೃತಪಟ್ಟಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಸಂಭವಿಸಿದೆ. ಸುರಪುರ ತಾಲೂಕಿನ ತಿಂಥಣಿ ಬಳಿ ಈ ಭೀಕರ ಅಪಘಾತವಾಗಿದ್ದು, ಇಡೀ ಕುಟುಂಬವೇ ಮಸಣ ಸೇರುವಂತಾಗಿದೆ.
ಒಂದು ವರ್ಷದ ಮಗು ಹನುಮಂತ, ತಂದೆ ಆಂಜನೇಯ (35) ತಾಯಿ ಗಂಗಮ್ಮ (28), ಆಂಜನೇಯನ ಸಹೋದರನ ಮಕ್ಕಳಾದ ಪವಿತ್ರ (5) ಹಾಗೂ ರಾಯಪ್ಪ (3) ಮೃತ ದುರ್ವೈವಿಗಳು. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಗೆ ಸಾಗಿರುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೂವರು ಮಕ್ಕಳು ಹಾಗೂ ಪತ್ನಿಯನ್ನು ಕೂರಿಸಿಕೊಂಡು ಆಂಜನೇಯ ಸುರಪುರದಿಂದ ತಿಂಥಣಿ ಕಡೆಗೆ ಹೊರಟ್ಟಿದ್ದರು. ಈ ವೇಳೆ ಹಿಂಬದಿಯಿಂದ ಕೆಎಸ್​​ಆರ್​​ಟಿಸಿ ಬಸ್ ರಭಸವಾಗಿ ಡಿಕ್ಕಿಯಾಗಿದೆ. ಘಟನೆಯ ಭೀಕರತೆಗೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿತ್ತು. ಬೈಕ್​ ಸಂಪೂರ್ಣ ನಜ್ಜುಗುಜ್ಜಾಗಿದೆ. ಸುರಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!