ಚಿಕ್ಕಮಗಳೂರು: – ಕಣ್ಣು ಹಾಗೂ ಹಲ್ಲುಗಳು ಮನುಷ್ಯನ ವೃದ್ದಾಪ್ಯದಲ್ಲಿ ಬರುವಂಥ ಕಾಯಿಲೆಗಳಾಗಿದ್ದು, ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಶರೀರವು ಅನಾರೋಗ್ಯಕ್ಕೆ ತುತ್ತಾಗಲಿದೆ ಎಂದು ನೇಚರ್ ಕನ್ಸರ್ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಎಚ್ಚರಿಕೆ ನೀಡಿದರು.
ನಗರದ ನೆಹರು ರಸ್ತೆಯ ಆರ್ಯ ನಯನಜ ಶ್ರೀರಾಮಮಂದಿರ ಸವಿತಾ ಸಮಾಜದ ಸಭಾಂಗಣದಲ್ಲಿ ಪ್ರಸಾದ್ ನೇತ್ರಾಲಯ, ಆರ್ಯ ನಯನಜ ಸವಿತಾ ಸಮಾಜ, ಲಯನ್ಸ್ ಕ್ಲಬ್, ನೇಚರ್ ಕನ್ಸರ್ವೇಷನ್ ಟ್ರಸ್ಟ್ ವತಿಯಿಂದ ಮಂಗಳವಾರ ಏರ್ಪಡಿಸಿದ್ಧ ಉಚಿತ ಕಣ್ಣು, ದಂತ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನ ದೇಹದ ಬಹುಮಖ್ಯ ಅಂಗಾಂಗಳಾದ ಕಣ್ಣು, ಹಲ್ಲುಗಳನ್ನು ಕಾಪಾಡಲು ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಕನಿಷ್ಟ ಆರು ತಿಂಗಳಿಗೊಮ್ಮೆ ನೇತ್ರ, ದಂತಗಳ ತಪಾಸಣೆಗೆ ಒಳಪಡಿಸಿದರೆ ಸುರಕ್ಷಿತ ವಾಗಿ ರಕ್ಷಿಸಿಕೊಳ್ಳಲು ಸಾಧ್ಯವಾಗಿದ್ದು ಈ ಬಗ್ಗೆ ಅಸಡ್ಡೆ ತೋರಬಾರದು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಹಲ್ಲುಗಳ ಬಗ್ಗೆ ಕಾಳಜಿ ವಹಿಸದ ಕಾರಣ ಯುವಪೀಳಿಗೆಯಲ್ಲೂ ಹಲ್ಲಿನ ಬಾಧೆ ಗಳು ಹೆಚ್ಚಳಗೊಳ್ಳುತ್ತಿವೆ. ಜೊತೆಗೆ ಬಾಲ್ಯಾವಸ್ಥೆಯಲ್ಲೇ ಮಕ್ಕಳಿಗೆ ದಂತದ ಬಗ್ಗೆ ಪಾಲಕರು ಮುತುವರ್ಜಿ ಹಾಗೂ ಸುರಕ್ಷತೆ ವಹಿಸದ ಕಾರಣ ಸಣ್ಣ ವಯಸ್ಸಿನಲ್ಲೇ ಹಲ್ಲುಗಳನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ವಾಗುತ್ತಿದೆ ಎಂದರು.
ಇತ್ತೀಚೆಗೆ ಮಕ್ಕಳ ಪಾಲನೆ, ಸಂಸಾರ ನಿರ್ವಹಣೆಯಲ್ಲಿ ಮನೆಯ ಹಿರಿಯರು ಸ್ವಂತ ಆರೋಗ್ಯದ ಬಗ್ಗೆ ಗಮನಹರಿಸುತ್ತಿಲ್ಲ. ಇದರಿಂದ ಅನಾರೋಗ್ಯ ಕಾಡುವ ಮೂಲಕ ಭವಿಷ್ಯದಲ್ಲಿ ಬಹುದೊಡ್ಡ ಸಮಸ್ಯೆ ಎದು ರಾಗಲಿದೆ. ಆದ್ದರಿಂದ ಅಲ್ಲಲ್ಲಿ ನಡೆಯುವ ಉಚಿತ ಶಿಬಿರದಲ್ಲಿ ಪಾಲ್ಗೊಳ್ಳಬೇಕು
ಆರ್ಯ ನಯನಜ ಶ್ರೀರಾಮಮಂದಿರ ಸವಿತಾ ಸಮಾಜದ ಅಧ್ಯಕ್ಷ ಸಿ.ಎಂ.ಯೋಗೀಶ್ ಮಾತನಾಡಿ ಇಂದಿನ ಶಿಬಿರದಲ್ಲಿ ಒಟ್ಟು ೭೦ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಒಟ್ಟಾರೆ ಸಾರ್ವಜ ನಿಕರ ಆರೋಗ್ಯ ದೃಷ್ಟಿಯಿಂದ ಶಿಬಿರಗಳನ್ನು ನಡೆಸಿ ಸ್ಪಂದಿಸುವ ಕಾರ್ಯ ಮಾಡಲಾಗಿದೆಎಂದು ಹೇಳಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರ್, ಆರ್ಯ ನಯನಜ ಶ್ರೀರಾಮಮಂದಿರ ಸವಿತಾ ಸಮಾಜದ ಯುವವೇದಿಕೆ ಅಧ್ಯಕ್ಷ ಧನರಾಜ್, ಪ್ರಧಾನ ಕಾರ್ಯದರ್ಶಿ ಡಿ.ಶೇಷಾದ್ರಿ, ಖಜಾಂಚಿ ಎನ್.ಗಿರೀ ಶ್, ಸಮಾಜದ ಮುಖಂಡರುಗಳಾದ ನಾರಾಯಣ್, ಲಕ್ಷ್ಮೀಕಾಂತ್, ಲತೇಶ್, ಸಿ.ಶಿವಣ್ಣ, ಕೆ.ಟಿ.ಕೃಷ್ಣಮೂ ರ್ತಿ, ಎನ್.ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.
