ಚಿಕ್ಕಮಗಳೂರು: ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ನೀರುಗಂಡಿಯಲ್ಲಿ ನಡೆದಿದೆ.
ಹೌದು .. ಅಕ್ಷಯ್ (22) ಮೃತ ದುರ್ದೈವಿ, ವಿಕಾಸ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡೊಸಲಾಗಿದೆ.
ಇಕೋ ಕಾರಿನಲ್ಲಿ ಅಕ್ಷಯ್ ಹಾಗೂ ವಿಕಾಸ್ ಇದ್ದರೆ ಮತ್ತೊಂದು ಕಾರಾದ ಕ್ರೆಟಾದಲ್ಲಿ ಬೆಂಗಳೂರು ಮೂಲದ ಕುಟುಂಬ ಪ್ರಯಾಣ ಬೆಳೆಸುತ್ತಿತ್ತು ಈ ಕಾರಿನಲ್ಲಿದ್ದ ಇಬ್ಬರ ಕಾಲು ಮುರಿತಗೊಂಡಿದ್ದು ಸ್ಥಳಿಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ಸಂಬಂಧ ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.
