ಧರ್ಮಸ್ಥಳದಲ್ಲಿ 39 ವರ್ಷಗಳ ಹಿಂದೆ ಅಸಹಜವಾಗಿ ಸಾವನ್ನಪ್ಪಿದ ಪದ್ಮಲತಾ ಪ್ರಕರಣವನ್ನು ಮರು ತನಿಖೆ ಮಾಡಿ ಎಂದು ಎಸ್ಐಟಿ ಗೆ ಪದ್ಮಲತಾ ಸಹೋದರಿ ಇಂದ್ರಾವತಿ ದೂರು ಸಲ್ಲಿಸಿದ್ದಾರೆ.
39 ವರ್ಷಗಳ ಹಿಂದೆ ನೇತ್ರಾವತಿ ನದಿ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಪದ್ಮಲತಾ ಅವರ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣವನ್ನು ಮರು ತನಿಖೆ ಮಾಡಬೇಕು ಎಂದು ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬೋಳಿಯಾರ್ ನಿವಾಸಿ ಪದ್ಮಲತಾ ಸಹೋದರಿ ಇಂದ್ರಾವತಿ ಎಸ್ ಐಟಿಗೆ ದೂರು ಸಲ್ಲಿಸಿದ್ದಾರೆ.
ಈ ವೇಳೆ ಮಾಧ್ಯನದವರೊಂದಿಗೆ ಮಾತನಾಡಿದ ಅವರು ಪದ್ಮಲತಾ ಸಾವನ್ನಪ್ಪಿ 39 ವರ್ಷ ಕಳೆದಿದೆ .ಈ ಹಿಂದೆ CID ಪತ್ತೆ ಹಚ್ಚಲಾಗದ ಪ್ರಕರಣ ಅಂತಾ ರಿಪೋರ್ಟ್ ಕೊಟ್ಟಿತ್ತು .ಈಗ SIT ಮೇಲೆ ನಂಬಿಕೆಯಿದೆ, ಆರೋಪಿಗಳನ್ನ ಪತ್ತೆ ಹಚ್ತಾರೆ ಎಂದು ಅವರು ಹೇಳಿದ್ದಾರೆ.
