Saturday, August 15, 2026
Homeಕ್ರೈಮ್ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ನೆಲ್ಲೂರು ನ್ಯಾಯಾಲಯಕ್ಕೆ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ

ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ನೆಲ್ಲೂರು ನ್ಯಾಯಾಲಯಕ್ಕೆ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ

Telegram Group
Join Now

ತಿರುಪತಿ: ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ (TTD) ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಕಲಬೆರಕೆ ಮಾಡಿರುವ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ತನಿಖಾ ದಳ (CBI) ನೇತೃತ್ವದ ವಿಶೇಷ ತನಿಖಾ ತಂಡವು (SIT) ನೆಲ್ಲೂರು ಎಸಿಬಿ ನ್ಯಾಯಾಲಯಕ್ಕೆ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ವರದಿಯು ಪವಿತ್ರ ಪ್ರಸಾದದ ಹೆಸರಿನಲ್ಲಿ ನಡೆದಿದ್ದ ಬೃಹತ್ ಭ್ರಷ್ಟಾಚಾರದ ಜಾಲವನ್ನು ಬಯಲಿಗೆಳೆದಿದೆ.

36 ಮಂದಿ ವಿರುದ್ಧ ದೋಷಾರೋಪಣೆ
ಸುಮಾರು 15 ತಿಂಗಳುಗಳ ಕಾಲ ದೇಶದ 12 ರಾಜ್ಯಗಳಲ್ಲಿ ಸುದೀರ್ಘ ತನಿಖೆ ನಡೆಸಿದ ಸಿಬಿಐ, ಒಟ್ಟು 36 ಮಂದಿಯನ್ನು ಪ್ರಮುಖ ಆರೋಪಿಗಳೆಂದು ಗುರುತಿಸಿದೆ. ಈ ಪಟ್ಟಿಯಲ್ಲಿ ವಿವಿಧ ಡೈರಿಗಳ ಮಾಲೀಕರು, ರಾಸಾಯನಿಕ ಪೂರೈಕೆದಾರರು ಮತ್ತು ಟಿಟಿಡಿಯ ಮಾಜಿ ಅಧಿಕಾರಿಗಳು ಸೇರಿದ್ದಾರೆ.

250 ಕೋಟಿ ಮೌಲ್ಯದ ನಕಲಿ ತುಪ್ಪದ ವ್ಯವಹಾರ
2019 ರಿಂದ 2024ರ ಅವಧಿಯಲ್ಲಿ ಟಿಟಿಡಿಗೆ ಅಂದಾಜು 250 ಕೋಟಿ ಮೌಲ್ಯದ ಸುಮಾರು 68 ಲಕ್ಷ ಕೆಜಿ ನಕಲಿ ತುಪ್ಪವನ್ನು ಸರಬರಾಜು ಮಾಡಲಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ತನಿಖೆಯ ಪ್ರಮುಖ ಅಂಶಗಳು ಹೀಗಿವೆ:

ಶುದ್ಧ ಹಸುವಿನ ತುಪ್ಪದ ಬದಲಿಗೆ ಪಾಮ್ ಆಯಿಲ್, ಕರ್ನಲ್ ಆಯಿಲ್, ಅಪಾಯಕಾರಿ ರಾಸಾಯನಿಕ ಮಿಶ್ರಣಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು.

ಕಡಿಮೆ ದರದ ಈ ಮಿಶ್ರಣಗಳನ್ನು ಬಳಸಿ, ನೋಡಲು ಮತ್ತು ವಾಸನೆಗೆ ಶುದ್ಧ ತುಪ್ಪದಂತೆಯೇ ಕಾಣುವಂತೆ ನಕಲಿ ತುಪ್ಪವನ್ನು ಸಿದ್ಧಪಡಿಸಲಾಗುತ್ತಿತ್ತು.

ಪ್ರಮುಖ ಆರೋಪಿಗಳು ಮತ್ತು ಡೈರಿಗಳ ವಿವರ: ತನಿಖಾ ವರದಿಯ ಪ್ರಕಾರ ಈ ದಂಧೆಯ ಕೇಂದ್ರಬಿಂದುವಾಗಿ ಹಲವು ಸಂಸ್ಥೆಗಳು ಕೆಲಸ ಮಾಡಿವೆ:

ಭೋಲೆ ಬಾಬಾ ಆರ್ಗಾನಿಕ್ ಡೈರಿ (ಉತ್ತರಾಖಂಡ): ನಿರ್ದೇಶಕರಾದ ಪೊಮಿಲ್ ಜೈನ್ ಮತ್ತು ವಿಪಿನ್ ಜೈನ್ ಈ ರಾಕೆಟ್‌ನ ಮುಖ್ಯಸ್ಥರೆಂದು ಗುರುತಿಸಲಾಗಿದೆ.

ವೈಷ್ಣವಿ ಡೈರಿ: ಸಿಇಒ ಅಪೂರ್ವ ವಿನಾಯಕಾಂತ್ ಚಾವ್ಡಾ.

ಎಆರ್ ಡೈರಿ: ಎಂಡಿ ಆರ್. ರಾಜಶೇಖರನ್.

ಅಜಯ್ ಕುಮಾರ್ ಸುಗಂಧ್: ದೆಹಲಿಯ ರಾಸಾಯನಿಕ ವ್ಯಾಪಾರಿ.

ಟಿಟಿಡಿ ಮಾಜಿ ಅಧಿಕಾರಿಗಳು: ಪ್ರಳಯ ಕಾವೇರಿ ಮುರಳಿ ಕೃಷ್ಣ ಮತ್ತು ಆರ್‌ಎಸ್‌ಎಸ್‌ವಿಆರ್ ಸುಬ್ರಹ್ಮಣ್ಯಂ ಸೇರಿದಂತೆ ಹಲವರು ಭ್ರಷ್ಟಾಚಾರಕ್ಕೆ ಸಾಥ್ ನೀಡಿದ ಆರೋಪ ಎದುರಿಸುತ್ತಿದ್ದಾರೆ.

ಕೋಟಿಗಟ್ಟಲೆ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಈ ಪ್ರಕರಣದ ವಿಚಾರಣೆ ಈಗ ನ್ಯಾಯಾಲಯದಲ್ಲಿ ಮಹತ್ವದ ಘಟ್ಟ ತಲುಪಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments