ಚಿಕ್ಕಮಗಳೂರು: ದೇವರ ಪೂಜೆಗೆ ಹೋದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅರ್ಚಕರ ಮನೆ ಬೆಂಕಿಗಾಹುತಿಯಾದ ಘಟನೆ ನಗರದ ರಾಮನಹಳ್ಳಿ ನಡೆದಿದೆ. ರಾಮೇಶ್ವರ ದೇವಾಲಯದಲ್ಲಿ
ಅರ್ಚಕರಾಗಿರುವ 86 ವರ್ಷದ ಕೃಷ್ಣಮೂರ್ತಿ ಅವರ ಮನೆಯಲ್ಲಿ ಅವಘಡ ನಡೆದಿದೆ.
ವಿದ್ಯುತ್ ಅವಘಡದಿಂದ ವಾಷಿಂಗ್ ಮಷೀನ್, ಫ್ರಿಡ್ಜ್, ಟಿವಿ ಸಂಪೂರ್ಣ ಹಾನಿಯಾಗಿದೆ.ಮನೆಯ ಸಿಲಿಂಗ್ ಕೂಡ ಬಿರುಕು ಬಿಟ್ಟಿದ್ದು ಅರ್ಚಕರು ಕಂಗಾಲಾಗಿ ಹೋಗಿದ್ದಾರೆ.
ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
