ಸಕಲೇಶಪುರ: ಆಲೂರು ತಾಲ್ಲೂಕು ಪಾಳ್ಯ ಹೋಬಳಿ ದಾನಿಹಳ್ಳಿಯಲ್ಲಿ ₹20 ಕೋಟಿ ವೆಚ್ಚದ ನೂತನ ವಿದ್ಯುತ್ ವಿತರಣಾ ಉಪಕೇಂದ್ರಕ್ಕೆ ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ನೂತನ ಉಪ ಕೇಂದ್ರದಿಂದ ನಿರಂತರ ವಿದ್ಯುತ್ ಒದಗಿಸಲಾಗಿದ್ದು ಹಾಗೆ ಇದರಿಂದ ರೈತರಿಗೆ ದೊಡ್ಡ ಅನುಕೂಲವಾಗಲಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಹಾಗೆ ಆಲೂರು ತಾಲ್ಲೂಕು ಪಾಳ್ಯ ಹೋಬಳಿ ದಾನಿಹಳ್ಳಿಯಲ್ಲಿ ನೂತನ ವಿದ್ಯುತ್ ವಿತರಣಾ ಉಪ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸಿದರು. ಆಲೂರು ತಾಲ್ಲೂಕಿನ ಜನರ ದಶಕಗಳ ಬೇಡಿಕೆ ಈಡೇರಿದೆ ಎಂದು ಸಂತಸಪಟ್ಟರು.

ಹಾಗೆ ಇದರ ಬಗ್ಗೆ ವಿಧಾನಸಭಾ ಅಧಿವೇಶದಲ್ಲಿ ಶಾಸಕ ಸಿಮೆಂಟ್ ಮಂಜು ಇದರ ಬಗ್ಗೆ ಪ್ರಸ್ತಾಪ ಸಹ ಮಾಡಿದ್ದರು.
