ಎನ್ ಆರ್ ಪುರ: ಜಯಪುರದಿಂದ ಬಸರೀಕಟ್ಟೆ ಸಂಪರ್ಕಿಸುವ ಮಾರ್ಗಮಧ್ಯೆ ಎಮ್ಮೆಗೊಂಡ ಬಳಿ ಬಸ್ಸೊಂದು ಹಾಳಾಗಿದ್ದು ಕೆಲ ಕಾಲ ಈ ರಸ್ತೆಯಲ್ಲಿ ಸಂಚಾರ ಬಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.ಈಗ ಎಲ್ಲವೂ ಸರಿಯಾಗಿ ವಾಹನಗಳು ಸಂಚಾರ ನಡೆಸುತ್ತಿವೆ.

ಈ ರಸ್ತೆಯೂ ಹೊರನಾಡು ಶೃಂಗೇರಿ ಸಂಪರ್ಕಿಸುವ ಮುಖ್ಯರಸ್ತೆಯೂ ಆಗಿರುವುದರಿಂದ ಪ್ರವಾಸಿಗರು ಬದಲಿ ರಸ್ತೆ ಇಲ್ಲದೆ ಪರದಾಡುವಂತಾಗಿತ್ತು.ನಂತರ ಲಘ ವಾಹನಗಳಿಗೆ ಸಂಚರಿಸಲು ಸಂಚರಿಸುವ ಪರಿಸ್ಥಿತಿ ಎದುರಾಗಿತ್ತು
ಬಸ್ಸು ನಡುರಸ್ತೆಯಲ್ಲೆ ಹಾಳಾದ ಪರಿಣಾಮ ಬಸರೀಕಟ್ಟೆಯಿಂದ ಜಯಪುರ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳು ಬಸರೀಕಟ್ಟೆಯಿಂದ ಹೇರೂರು ಮಾರ್ಗದಲ್ಲಿ ಸಂಚರಿಸುತ್ತಿವೆ.
ವರದಿ: ಶಶಿ ಬೆತ್ತದಕೊಳಲು
