ಚಿಕ್ಕಮಗಳೂರು: ಹಾಸನದಲ್ಲಿ ಇಂದು ನಡೆಯುವ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ KSRTC ಬಸ್ಸುಗಳನ್ನು ನೀಡುತ್ತಿದ್ದು ಸಂಚಾರದಲ್ಲಿ ವ್ಯತ್ಯಯ ಆಗಲಿದೆ.
ಈಗಾಗಲೇ 80ಕ್ಕೂ ಹೆಚ್ಚು ಬಸ್ಸುಗಳಿಗೆ ಕೋರಿಕೆ ಸಲ್ಲಿಸಿದ್ದು ಚಿಕ್ಕಮಗಳೂರು ಕಡೂರು ಮೂಡಿಗೆರೆ ಡಿಪೋಗಳಿಂದ ಸಂಚರಿಸುವ ಬಸ್ಸುಗಳಲ್ಲಿ ವ್ಯವಸ್ಥೆ ಇರುವುದು ಅನುಮಾನವಾಗಿದೆ.
ಇದರಿಂದ ನಿತ್ಯ ಬಸ್ಸುಗಳನ್ನೇ ಅವಲಂಬಿಸಿರುವ ಸಾರ್ವಜನಿಕರು, ನೌಕರರು, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಲಿದೆ.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಗ್ರಾಮಾಂತರ ಪ್ರದೇಶ ಹಾಗೂ ಅಂತರ ಜಿಲ್ಲೆಗೆ ತೆರುಳುವ ಬಹುತೇಕ ಬಸ್ಸುಗಳನ್ನು ನೀಡುತ್ತಿರುವುದರಿಂದ ತೊಂದರೆ ಉಂಟಾಗುವುದು ಖಚಿತವಾಗಿದ್ದು, ಬದಲಿ ವ್ಯವಸ್ಥೆಯನ್ನು ಜನತೆ ಕಂಡುಕೊಳ್ಳಬೇಕಾಗಿದೆ.
ಜಿಲ್ಲೆಯ ಗ್ರಾಮಾಂತರ ಪ್ರದೇಶ ಹಾಗೂ ಅಂತರ ಜಿಲ್ಲೆಗೆ ತೆರುಳುವ ಬಹುತೇಕ ಬಸ್ಸುಗಳನ್ನು ನೀಡುತ್ತಿರುವುದರಿಂದ ತೊಂದರೆ ಉಂಟಾಗುವುದು ಖಚಿತವಾಗಿದ್ದು, ಪರ್ಯಾಯ ವ್ಯವಸ್ಥೆಯನ್ನು ಜನ ಕೊಂಡುಕೊಳ್ಳಬೇಕಾಗಿದೆ.
ಬಸ್ ಸಂಚಾರ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಖಾಸಗಿ ವಾಹನಗಳು ದುಪ್ಪಟ್ಟು ಹಣ ಪೀಕುವ ಸಾಧ್ಯತೆ ಹೆಚ್ಚಿದ್ದು ಸಂಬಂಧ ಪಟ್ಟ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕಾಗಿದೆ
