Tuesday, February 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಮೈಸೂರು ದಸರಾದಲ್ಲಿ ಜಿ.ಪಂ ʼಭದ್ರಬಾಲ್ಯʼ ಸ್ತಬ್ದಚಿತ್ರ ಪ್ರದರ್ಶನ

ಚಿಕ್ಕಮಗಳೂರು: ಮೈಸೂರು ದಸರಾದಲ್ಲಿ ಜಿ.ಪಂ ʼಭದ್ರಬಾಲ್ಯʼ ಸ್ತಬ್ದಚಿತ್ರ ಪ್ರದರ್ಶನ

ಚಿಕ್ಕಮಗಳೂರು: ಮೈಸೂರು ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ 2025 ನೇ ಸಾಲಿನ ಸ್ತಬ್ದಚಿತ್ರ ಪ್ರದರ್ಶನ ಏರ್ಪಡಿಸಿದ್ದು, ಈ ಪ್ರದರ್ಶನದಲ್ಲಿ ಜಿಲ್ಲೆಯ ‘ಭದ್ರಬಾಲ್ಯ’ ಸ್ತಬ್ದಚಿತ್ರ ನೋಡುಗರ ನಿಬ್ಬೆರಗಾಗುವಂತೆ ಮಾಡಿತು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್ ಕೀರ್ತನ ತಿಳಿಸಿದರು.

ಅವರು ಇಂದು ಜಿ.ಪಂ ಮಿನಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಾಲ್ಯವಿವಾಹ, ಬಾಲ ಗರ್ಭಿಣಿ, ಪೋಕ್ಸೋ ಪ್ರಕರಣ ತಡೆಗೆ ಭದ್ರಬಾಲ್ಯ ಯೋಜನೆ ಜಿಲ್ಲೆಯ ಜಿ.ಪಂ ನಲ್ಲಿ ಜಾರಿಗೆ ಬಂದಿದ್ದು, ಇದರಲ್ಲಿ ಸುಮಾರು ವಿವಿಧ 20 ಇಲಾಖೆಗಳು ಸೇರಿ ಒಟ್ಟುಗೂಡಿ ಕಾರ್ಯಾಚರಣೆ ಮಾಡುತ್ತಿವೆ ಎಂದರು.

ಜಿಲ್ಲಾಡಳಿತ, ಜಿ.ಪಂ, ಪೊಲೀಸ್ ಇಲಾಖೆ ಸಹಯೋಗದ ಜೊತೆಗೆ ಶಾಲಾ ಶಿಕ್ಷಣ ಇಲಾಖೆಯಡಿ 17 ಅಂಶದ ಕಾರ್ಯಕ್ರಮಗಳಾದ ಕನಸಿನ ಗೋಡೆ, ವಿಶ್ವಾಸ ಪೆಟ್ಟಿಗೆ, ತಿಳಿನಲಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ಮತ್ತು ಮಹಿಳಾ ಹಕ್ಕುಗಳ ಕಾವಲು ಸಮಿತಿಯವರಿಗೆ ಕರ್ನಾಟಕ ಹೆಲ್ತ್ ಟ್ರಸ್ಟ್ ಮೂಲಕ ತರಬೇತಿ ನೀಡಲಾಗಿದ್ದು, ಇವರು ಗ್ರಾಮೀಣ ಜನರಲ್ಲಿ ಕಾನೂನುಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆಂದರು.

ಇವೆಲ್ಲಾ ಅಂಶಗಳನ್ನೊಳಗೊಂಡ ಸ್ತಬ್ದಚಿತ್ರ ಪ್ರದರ್ಶನಕ್ಕೆ ಅವಕಾಶ ಮೈಸೂರು ದಸರಾದಲ್ಲಿ ಲಭ್ಯವಾಯಿತು. ಈ ಸ್ತಬ್ದಚಿತ್ರಕ್ಕೆ ಒಳ್ಳೆಯ ಗೌರವ ಸಿಕ್ಕಿದೆ. ಬಹುಮಾನ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!