ಚಿಕ್ಕಮಗಳೂರು: ಮೂಡಿಗೆರೆ ಕಾಂಗ್ರೆಸ್ ಪಾಳಯಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನ ಇದೀಗ ಬಹಿಂಗಗೊಂಡಿದ್ದು ಶಾಸಕಿ ನಯನ ಮೋಟಮ್ಮ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರ ನಡುವಿನ ಸಮರ ತಾರಕ್ಕಕ್ಕೇರಿದೆ. ಇದೀಗ ತಮ್ಮ ವಿರುದ್ಧ ಹಿರಿಯ ಮುಂಖಡರುಗಳು ಧ್ವನಿ ಎತ್ತುತ್ತಿರುವುದರ ಬಗ್ಗೆ ಶಾಸಕಿ ನಯನ ಮೋಟಮ್ಮ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹೌದು .. ಇಲ್ಲಿ ನಡೆದ ಇಡೀ ಬೆಳವಣಿಗೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ಗಮನಕ್ಕೆ ಬಂದಿದೆ. ಜಿಲ್ಲಾಧ್ಯಕ್ಷರೇ ಈ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತರುತ್ತಾರೆ ಹಾಗೆ ಮಾಧ್ಯಮಗಳ ಮೂಲಕ ಈ ವಿಚಾರ ಹೈಕಮಾಂಡ್ ಗೂ ತಿಳಿದಿರುತ್ತದೆ ಎಂದು ಹೇಳಿದರು.
ಹಾಘೆ ಈ ವಿಷಯದ ಬಗ್ಗೆ ನಾನೇನು ಹೆಚ್ಚು ಮಾತನಾಡಲ್ಲ ಜಿಲ್ಲಾಧ್ಯಕ್ಷರೇ ಹೈಕಮಾಂಡ್ ಗೆ ತಿಳಿಸುತ್ತಾರೆ ಅವರೇ ಅಂತೀಮ ತೀರ್ಮಾನಕ್ಕೆ ಬರುತ್ತಾರೆ ಎಂದು ಹೇಳಿ ನುಣುಚಿಕೊಂಡರು.
ಹೀಗಾಗಿ ಮುಂದಿನ ದಿನಗಳಲ್ಲಿ ಈ ಆತಂರಿಕ ಕಚ್ಚಾಟಕ್ಕೆ ಹೈಕಮಾಂಡ್ ಎಂಟ್ರಿಯಾಗುತ್ತಾ ಇಲ್ವಾ ಎಂದು ಕಾದು ನೋಡಬೇಕಿದೆ.
