ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಅಧ್ಯಕ್ಷರಾಗಿ ಸಿ.ಟಿ.ರವಿ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಆ ನಂತರ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನ ಎನ್ನುವುದು ಅಧಿಕಾರವಲ್ಲ, ಬದಲಿಗೆ ಮಹತ್ವದ ಜವಾಬ್ದಾರಿ. ಬ್ಯಾಂಕನ್ನು ಯಶಸ್ವಿಯಾಗಿ ನಡೆಸಿ, ಜನರಿಗೆ ನೆರವಾಗುವ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸವಿದೆ ಎಂದು ಹೇಳಿದರು

ಅದೇ ರೀತಿ ಈ ಅವಕಾಶ ಕಲ್ಪಿಸಿದ ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳಿಗೆ, ನನ್ನ ಆತ್ಮೀಯ ಬಂಧುಗಳಿಗೆ, ಹಿತೈಷಿಗಳಿಗೆ ಹಾಗೂ ನನ್ನೊಲುಮೆಯ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಸಹ ತಿಳಿಸಿದರು.
