ಹಾಸನ: ಸಕಲೇಶಪುರ ತಾಲ್ಲೂಕಿನಲ್ಲಿ ಮುಂದುವರೆದ ಕಾಡಾನೆ ಉಪಟಳ. ಹೊಸಳ್ಳಿ ಬೆಟ್ಟದಲ್ಲಿ ಕಾಣಿಸಿಕೊಂಡು 25 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು.ಬೆಟ್ಟ ಹತ್ತೋಕು ಸೈ ಬೆಟ್ಟ ಇಳಿಯುವುದಕ್ಕೂ ಸೈ ಎನ್ನುವಂತೆ ಕಾಣುತ್ತಿತ್ತು.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸಳ್ಳಿ ಬೆಟ್ಟ, ಒಂದೇ ಹಿಂಡಿನಲ್ಲಿ 25 ಕ್ಕೂ ಹೆಚ್ಚು ಕಾಡಾನೆಗಳಿರುವುದ ನೋಡಿ ಆತಂಕದಲ್ಲಿ ಜನತೆ. ಭತ್ತ, ಕಾಫಿ, ಅಡಿಕೆ ಬೆಳೆ ಹಾನಿಗೊಳಿಸಿ ಸಂಚಾರ
ಮಕ್ಕಳು ಸಾಕಿದ ಹಾಗೆ ಕಾಫಿ ಗಿಡಗಳನ್ನು ಸಾಕಿದ್ದೇವೆ. ನಮ್ಮ ಕಷ್ಟವನ್ನ ಯಾರು ಕೇಳುತ್ತಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಜನರು ಆಕ್ರೋಶ ಹೊರಹಾಕಿದ್ದಾರೆ.
