ಹಾಸನ: ನಗರದಲ್ಲಿ ವಿವಿಧ 95ಕಡೆ ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕಲಾಗುತ್ತಿರುವ ಹಿನ್ನೆಲೆ ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನ ನಡೆಸಿದರು.
ಇದರ ಅಂಗವಾಗಿ ರಸ್ತೆಯನ್ನು ಸುಂದರವಾಗಿ ಕಾಣುವ ಉದ್ದೇಶದಿಂದ ಹಾಸನ ರಿಂಗ್ ರಸ್ತೆಯಲ್ಲಿ ಶಾಸಕರು ಹಾಗೂ ಮೇಯರ್ ತ್ಯಾಜ್ಯ ವನ್ನು ತೆರವುಗೊಳಿಸಿದರು.
ಹಾಗೆ ಆ ಜಾಗದಲ್ಲಿ ಶಾಸಕ ಸ್ವರೂಪ್ ಪ್ರಕಾಶ್, ಮೇಯರ್ ಗಿರೀಶ್ ಚನ್ನವೀರಪ್ಪ ಹಾಗೂ ಮಾಜಿ ಸದಸ್ಯ ಕಮಲ್ ಕುಮಾರ್ ಅವರು ಗಿಡಗಳನ್ನು ನೆಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
