ಹಾಸನ: ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆ ವಿಶೇಷ ರೈಲುಗಳ ಸಂಚಾರಕ್ಕೆ ಯೋಜನೆ ರೂಪಿಸಿದೆ.
ಯಶವಂತಪುರದಿಂದ ವಯಾ ಅರಸೀಕೆರೆ ವಿಜಯಪುರಕ್ಕೆ ವಿಶೇಷ ರೈಲು ದಸರಾ ಹಬ್ಬದ ಸಮಯದಲ್ಲಿ ಬೆಂಗಳೂರಿನಿಂದ ವಿಜಯಪುರಕ್ಕೆ ಮತ್ತು ವಾಪಸ್ ಪ್ರಯಾಣಿಸುವವರಿಗಾಗಿ ನೈಋತ್ಯ ರೈಲ್ವೆಯು ಎರಡು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದೆ.
ಅವುಗಳ ವೇಳಾಪಟ್ಟಿ ಮತ್ತು ವಿವರಗಳು ಹೀಗಿವೆ:
ರೈಲು ಸಂಖ್ಯೆ: 06277 – ಯಶವಂತಪುರ-ವಿಜಯಪುರ ಎಕ್ಸ್ಪ್ರೆಸ್ ಸ್ಪೆಷಲ್
ಹೊರಡುವ ಸಮಯ: ಸೆಪ್ಟೆಂಬರ್ 30 ರಂದು ರಾತ್ರಿ 09:50 ಕ್ಕೆ ಯಶವಂತಪುರದಿಂದ.
ತಲುಪುವ ಸಮಯ: ಮರುದಿನ ಬೆಳಿಗ್ಗೆ 09:30 ಕ್ಕೆ ವಿಜಯಪುರ ತಲುಪಲಿದೆ.
ರೈಲು ಸಂಖ್ಯೆ: 06278 – ವಿಜಯಪುರ-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ಸ್ಪೆಷಲ್
ಹೊರಡುವ ಸಮಯ: ಅಕ್ಟೋಬರ್ 1 ರಂದು ಸಂಜೆ 05:30 ಕ್ಕೆ ವಿಜಯಪುರದಿಂದ.
ತಲುಪುವ ಸಮಯ: ಮರುದಿನ ಬೆಳಿಗ್ಗೆ 06:40 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ತಲುಪಲಿದೆ.ಈ ರೈಲುಗಳು ಎರಡೂ ಮಾರ್ಗಗಳಲ್ಲಿ (ಸಂಖ್ಯೆ 06277/06278 ಮತ್ತು 06279/06280) ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಎಸ್ಎಂಎಂ ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.
ಬೋಗಿಗಳ ವಿವರಗಳು
ಈ ಮೇಲೆ ತಿಳಿಸಿದ ಎಲ್ಲಾ ವಿಶೇಷ ರೈಲುಗಳು (ರೈಲು ಸಂಖ್ಯೆ 06271/06272, 06273/06274 ಮತ್ತು 06275/06276) ಒಟ್ಟು 19 ಬೋಗಿಗಳನ್ನು ಹೊಂದಿವೆ. ಈ ಬೋಗಿಗಳ ವಿಂಗಡಣೆ ಹೀಗಿದೆ:
ಎಸಿ 2 ಟೈರ್: 1 ಬೋಗಿ
ಎಸಿ 3 ಟೈರ್: 3 ಬೋಗಿಗಳು
ಸ್ಲೀಪರ್ ಕ್ಲಾಸ್: 10 ಬೋಗಿಗಳು
ಜನರಲ್ ಸೆಕೆಂಡ್ ಕ್ಲಾಸ್: 3 ಬೋಗಿಗಳು
ಎಸ್ಎಲ್ಆರ್/ಡಿ (SLR/D): 2 ಬೋಗಿಗಳು
ರೈಲ್ವೆ ಇಲಾಖೆಯು ಹಬ್ಬದ ಸಮಯದಲ್ಲಿ ಹೆಚ್ಚುವರಿ ಸೇವೆಗಳನ್ನು ಬಳಸಿಕೊಳ್ಳಲು ಪ್ರಯಾಣಿಕರಿಗೆ ತಿಳಿಸಿದೆ. ಹೆಚ್ಚಿನ ವಿವರಗಳಿಗಾಗಿ, ನೀವು ಈ ಕೆಳಗಿನ ಮಾರ್ಗಗಳನ್ನು ಅನುಸರಿಸಬಹುದು:
ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ಸಹಾಯವಾಣಿ ಸಂಖ್ಯೆ 139ಗೆ ಕರೆ ಮಾಡಿ. ನಿಮ್ಮ ಹತ್ತಿರದ ರೈಲು ನಿಲ್ದಾಣವನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
