Sunday, August 3, 2025
!-- afp header code starts here -->
Homeಜಿಲ್ಲಾಸುದ್ದಿನೊಳಂಬ ಸಮಾಜದ ಬಗ್ಗೆ ಅವಮಾನ: ಡಿ.ಎಸ್. ಸುರೇಶ್ ಮನೆ ಎದುರು ಪ್ರತಿಭಟನೆ

ನೊಳಂಬ ಸಮಾಜದ ಬಗ್ಗೆ ಅವಮಾನ: ಡಿ.ಎಸ್. ಸುರೇಶ್ ಮನೆ ಎದುರು ಪ್ರತಿಭಟನೆ

ಚಿಕ್ಕಮಗಳೂರು: ಮಾಜಿ ಶಾಸಕ ಡಿ.ಎಸ್ ಸುರೇಶ್‌ರವರು ನೊಳಂಬ ಸಮಾಜದ ಬಗ್ಗೆ ಉದ್ದಟತನದ ಹೇಳಿಕೆ ನೀಡಿರುವುದನ್ನು ನೊಳಂಬ ಸಮಾಜದ ಮುಖಂಡರು, ವಕೀಲರೂ ಆದ ರವಿ ಶ್ಯಾನುಭೋಗ್ ಅವರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಹೌದು .. ಅಜ್ಜಂಪುರದ ಗುರು ಸಿದ್ದರಾಮೇಶ್ವರ ಭವನದಲ್ಲಿ ಏರ್ಪಡಿಸಲಾಗಿದ್ದ ನೊಳಂಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಮಾಜಿ ಶಾಸಕ ಸುರೇಶ್‌ರವರು ಈ ರೀತಿ ಉದ್ದಟತನದ ಹೇಳಿಕೆ ನೀಡಿದ್ದು ಸರಿಯಲ್ಲ, ಅವರ ಹೇಳಿಕೆಯನ್ನ ವಾಪಾಸ್ ಪಡೆಯಬೇಕು ಮತ್ತು ನೊಳಂಬ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಅವರು, ಇಲ್ಲದಿದ್ದರೆ ಜು.25 ರಂದು ಸುರೇಶ್‌ರವರ ಮನೆ ಮುಂದೆ ಸಮಾಜದ ಸ್ವಾಭಿಮಾನಿ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಲಿದ್ದಾರೆಂದು ರವಿ ಶ್ಯಾನುಭೋಗ್ ಅವರು ಎಚ್ಚರಿಸಿದರು.

ಹಾಗೆ ಮಾಜಿ ಶಾಸಕ ಎಸ್.ಎಂ. ನಾಗರಾಜ್‌ರವರನ್ನು ಓಲೈಸುವ ಸಲುವಾಗಿ ಯಾರಿಗೂ ಹೆದರಬೇಡಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಉದ್ದಟತನದ ಹೇಳಿಕೆಯನ್ನು ಕೂಡಲೇ ವಾಪಾಸ್ ಪಡೆದು ಬಹಿರಂಗವಾಗಿ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!