ಜಯಪುರ: ಇಟ್ಟಿಗೆ ತಂದಿದ್ದ ಲಾರಿ ಬ್ರೇಕ್ ಫೇಲ್ ಆಗಿ ಕಂದಕಕ್ಕೆ ಉರುಳಿದ ಘಟನೆ ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳಾಲುಕೊಪ್ಪ ಸಮೀಪದ ಮೇಲಿನಕುಡಿಗೆಯಲ್ಲಿ ನಡೆದಿದೆ.
ಲಾರಿ ಬ್ರೇಕ್ ಫೇಲ್ ಆಗಿ ಹಿಂದೆ ಬರುವಾಗ ಲಾರಿಯಲ್ಲಿದ್ದ ಮೂರು ಜನ ಲಾರಿಯಿಂದ ಹಾರಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಈ ವೇಳೆ ಲಾರಿ ಅಡಾದಿಡ್ಡಿ ಹೋಗಿ ತೋಟವೊಂದಕ್ಕೆ ನುಗ್ಗಿ ಮರಕ್ಕೆ ಡಿಕ್ಕಿಹೊಡೆದು ಅಲ್ಲೇ ಪಲ್ಟಿಯಾಗಿ ಬಿದ್ದಿದೆ. ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ ಲಾರಿಯಲ್ಲಿದ್ದವರು ಸೇಫ್ ಆಗಿದ್ದು ಮಾತ್ರ ರೋಚಕವೆಂದರೆ ತಪ್ಪಾಗಲಾರದು.
