ಮೂಡಿಗೆರೆ: ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣದ ಹಂತದಲ್ಲಿರುವ ಕಟ್ಟಡ ಕಾಮಗಾರಿ ಕಾರ್ಯವನ್ನು ತಡೆಗಟ್ಟುವಂತೆ ಜೇನುಬೈಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಪ್ರತಿಕ್ರಿಯೆ ನೀಡಿದ ಗ್ರಾಮಸ್ಥ ತಾರೇಶ್ ಈಗಾಗಲೇ ಕಟ್ಟಡ ನಿರ್ಮಾಣ ತಡೆಗಟ್ಟಲು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು. ರಾಜ್ಯ ಹೆದ್ದಾರಿ ಬಳಿ ಕಟ್ಟಡ ನಿರ್ಮಾಣ ವಾಗುತ್ತಿದ್ದೂ. ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾರ್ಯ ಸ್ಥಗಿತ ಗೊಳಿಸಬೇಕು ಎಂದರು.
ರಸ್ತೆ ಮಧ್ಯ ಭಾಗದಿಂದ 40 ಮೀಟರ್ ಅಂತರ ಕಾಪಾಡದೆ ಇರುವುದು ಸರಿಯಲ್ಲ. ಈಗಾಗಲೇ ಹಂತುರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಟ್ಟಡ ನಿರ್ಮಿಸಿದಂತೆ ತಿಳುವಳಿಕೆ ಪತ್ರ ನೀಡಿದ್ದು. ಕಟ್ಟಡದ ಮಾಲೀಕ ಅರಣ್ಯ ಇಲಾಖೆ ಸಿಬ್ಬಂದಿ ಯಾಗಿದ್ದು ಪ್ರಭಾವ ಬಳಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಈ ಕೂಡಲೇ ಕಟ್ಟಡ ನೆಲ ಸಮ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೇನುಬೈಲು ಗ್ರಾಮಸ್ಥರು ಉಪಸ್ಥಿತರಿದ್ದರು.
