ಮೂಡಿಗೆರೆ: ಇಂದು ಬೆಳಗ್ಗೆ ಪಟ್ಟಣದ ಕೆ ಎಂ ರಸ್ತೆಯಲ್ಲಿ ಸ್ಥಳೀಯರೋಬ್ವರು ಕಸದ ಗಾಡಿಗೆ ಚೀಲದಲ್ಲಿ ಕಟ್ಟಿ ಇಟ್ಟಿದ್ದ ಕಸವನ್ನು ಮನೆಯ ಬಾಗಿಲಿಗೆ ತಂದು ಬಿಸಾಡಿ ಹೋಗಿರುವ ಘಟನೆ ಮೂಡಿಗೆರೆಯಲ್ಲಿ ನಡೆದಿದೆ. ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಈ ರೀತಿ ಮಾಡಿರುವ ದುರ್ವರ್ತನೆಗೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು .. ಸ್ಥಳೀಯ ನಿತಿನ್ ಮಾತನಾಡಿ ಯಾವುದೋ ಊರಿಂದ ಬಂದವರು ಹೀಗೆ ವರ್ತಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ಕಾರಣ, ಇವರಗಳನ್ನು ತಲೆ ಮೇಲೆ ಕೂರಿಸಿಕೊಂಡು ಮೆರೆಯುತ್ತಿದ್ದೂ ಕಾರ್ಮಿಕರ ಮೇಸ್ತ್ರಿ ತಾನೇ ಅಧ್ಯಕ್ಷನಂತೆ ವರ್ತಿಸುತ್ತಿದ್ದೂ ಈತನ ದುರಹಂಕಾರಕ್ಕೆ ಸ್ಥಳೀಯರು ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.
ಕಸ ಒಯ್ಯಲು ಸಾಧ್ಯವಿಲ್ಲ ಎಂದರು ಪರವಾಗಿಲ್ಲ ಆದರೆ ಕಸವನ್ನು ಮನೆ ಬಾಗಿಲಿಗೆ ಸುರಿದುದ್ದು ಎಷ್ಟು ಸರಿ ಎಂದು ಪ್ರಶ್ನಿದರು.
