Tuesday, March 10, 2026
Homeಜಿಲ್ಲಾಸುದ್ದಿಎನ್‌.ಆರ್‌.ಪುರ: ಸೋಲಾರ್‌ ಟೆಂಟಕಲ್‌ ಬೇಲಿ ನಿರ್ಮಾಣ ಕಾರ್ಯದಲ್ಲಿ ಭಾರೀ ಭ್ರಷ್ಟಾಚಾರ: ಮಾಜಿ ಸಚಿವ ಜೀವರಾಜ್‌ ಗಂಭೀರ...

ಎನ್‌.ಆರ್‌.ಪುರ: ಸೋಲಾರ್‌ ಟೆಂಟಕಲ್‌ ಬೇಲಿ ನಿರ್ಮಾಣ ಕಾರ್ಯದಲ್ಲಿ ಭಾರೀ ಭ್ರಷ್ಟಾಚಾರ: ಮಾಜಿ ಸಚಿವ ಜೀವರಾಜ್‌ ಗಂಭೀರ ಆರೋಪ

ಎನ್‌ ಆರ್‌ ಪುರ: ತಾಲೂಕಿನ ಕಾಡಾನೆಗಳ ನಿಯಂತ್ರಣಕ್ಕಾಗಿ ಅಳವಡಿಸಲಾಗಿರುವ ಸೋಲಾರ್‌ ಟೆಂಟಕಲ್‌ ಬೇಲಿ ನಿರ್ಮಾಣ ಕಾರ್ಯದಲ್ಲಿ ಭಾರೀ ಭ್ರಷ್ಟಾಚಾರ ಮತ್ತು ಅಕ್ರಮ ಕಾಮಗಾರಿ ನಡೆದಿದೆ ಎಂದು ಮಾಜಿ ಸಚಿವ ಜೀವರಾಜ್‌ ಗಂಭೀರ ಆರೋಪ ಮಾಡಿದ್ದಾರೆ.

ಸುಮಾರು 1.12 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಗುಣಮಟ್ಟದಿಂದ ಕೂಡಿಲ್ಲ ಎಂದು ದೂರಿದ್ದು ಈ ಯೋಜನೆಯಡಿ ಕಾಮಗಾರಿಯು ವೈಜ್ಞಾನಿಕವಾಗಿ ನಡೆದಿದ್ದು ಅಳವಡಿಸಲಾದ ಸೋಲಾರ್‌ ಬೇಲಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಆರೋಪಿಸಿದ್ದಾರೆ.

ಇದೊಂದು ಕೇವಲ ಅಧಿಕಾರಕ್ಕಾಗಿ ಮತ್ತು ಗುತ್ತಿಗೆದಾರರ ಲಾಘಕ್ಕಾಗಿ ನಡೆದಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕ್ಷೇತ್ರದ ಜನರ ಹಣ ದುರುಪಯೋಗಪಡಿಸಿಕೊಂಡಿದ್ದಾರೆ.ಹಾಗೆ ಈ ಘಟನೆ ಬಗ್ಗೆ ಉನ್ನತ ತನಿಖೆ ನಡೆಸಬೇಕು ಹಾಗೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸವಿ ಡಿ.ಎನ್.‌ ಜೀವರಾಜ್‌ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!