ಉಡುಪಿ: ರಾಜ್ಯದಲ್ಲಿ ಪೊಲೀಸರೇ ಕಳ್ಳರಾಗಿದ್ದಾರೆ.ದರೋಡೆ ,ಡ್ರಗ್ಸ್ ದಂಧೆಯಲ್ಲಿ ಪೊಲೀಸರೂ ಶಾಮೀಲಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್ .ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಕಾಪುವಿನ ಮಂಥನ್ ರೆಸಾರ್ಟ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ,ಹೊಸ ವರ್ಷಕ್ಕೆ ಇನ್ನೆರಡೇ ದಿನ ಬಾಕಿ ಇದೆ.ಇದೇ ವೇಳೆ ಮಾಹಾರಾಷ್ಟ್ರ ಪೊಲೀಸರು ರಾಜ್ಯದಲ್ಲಿ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ರಾಜ್ಯಕ್ಕೆ ಹೇರಳ ಪ್ರಮಾಣದ ಡ್ರಗ್ಸ್ ಬಂದಿದೆ.ಇದರಲ್ಲಿ ಪೊಲೀಸರೇ ಇನ್ವಾಲ್ವ್ ಆಗಿದ್ದಾರೆ ಎಂದರು.

ಬೆಂಗಳೂರು ಕಮಿಷನರ್ ಆಫೀಸ್ ಮುಂದೆ ವಾಹನದಲ್ಲಿ ಇರಿಸಿದ್ದ ಹಣವನ್ನು ಪೊಲೀಸರೇ ಕದ್ದಿದ್ದಾರೆ .ಈ ಸರಕಾರಕ್ಕೆ ನಿಯಂತ್ರಣ ಮಾಡಲು ಆಗ್ತಾ ಇಲ್ಲ ಎಂದರು.
