Wednesday, March 25, 2026
Homeವಿದೇಶಅಂತರಾಷ್ಟ್ರೀಯ ವ್ಯಾಪಾರದಲ್ಲಿ ತೆರಿಗೆಯೇ ಅಸ್ತ್ರವಾಗಿದೆ!; ಜಾಗತಿಕ ರಾಷ್ಟ್ರಗಳ ವಿರುದ್ಧ ನಿರ್ಮಲಾ ಸೀತಾರಾಮನ್ ವಾಗ್ದಾಳಿ

ಅಂತರಾಷ್ಟ್ರೀಯ ವ್ಯಾಪಾರದಲ್ಲಿ ತೆರಿಗೆಯೇ ಅಸ್ತ್ರವಾಗಿದೆ!; ಜಾಗತಿಕ ರಾಷ್ಟ್ರಗಳ ವಿರುದ್ಧ ನಿರ್ಮಲಾ ಸೀತಾರಾಮನ್ ವಾಗ್ದಾಳಿ

ಅಂತರಾಷ್ಟ್ರೀಯ ವ್ಯಾಪಾರ ವಹಿವಾಟಿನಲ್ಲಿ ಕೆಲವು ದೇಶಗಳು ತೆರಿಗೆ ವಿಧಿಸುವುದನ್ನೇ ಒಂದು ದೊಡ್ಡ ಆಯುಧವಾಗಿ ಬಳಸಿಕೊಳ್ಳುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ೨೦೨೫ರ ಭಾರತೀಯ ಆರ್ಥಿಕ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಇವತ್ತಿನ ದಿನಗಳಲ್ಲಿ ಜಾಗತಿಕ ವ್ಯಾಪಾರವು ಮುಕ್ತವಾಗಿ ಅಥವಾ ನ್ಯಾಯಯುತವಾಗಿ ನಡೆಯುತ್ತಿಲ್ಲ ಎಂಬ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಭಾರತವು ತನ್ನ ದೇಶದ ಸಣ್ಣ ಮತ್ತು ಸ್ಥಳೀಯ ಕೈಗಾರಿಕೆಗಳನ್ನು ರಕ್ಷಿಸುವ ಉದ್ದೇಶದಿಂದ ಮಾತ್ರ ತೆರಿಗೆಯನ್ನು ಬಳಸುತ್ತದೆಯೇ ಹೊರತು, ಅದನ್ನು ಎಂದಿಗೂ ಇತರ ದೇಶಗಳಿಗೆ ತೊಂದರೆ ಕೊಡುವ ಅಸ್ತ್ರವಾಗಿ ಬಳಸಿಲ್ಲ ಎಂದು ಹೇಳಿದ್ದಾರೆ. ಮೊದಮೊದಲು ತೆರಿಗೆ ವಿಧಿಸುವುದು ಸರಿಯಲ್ಲ ಎಂದು ಬುದ್ಧಿ ಹೇಳುತ್ತಿದ್ದ ರಾಷ್ಟ್ರಗಳೇ, ಈಗ ದಿಢೀರನೆ ಹೊಸ ಹೊಸ ತೆರಿಗೆಗಳನ್ನು ಹೇರುವ ಮೂಲಕ ಜಾಗತಿಕ ಮಾರುಕಟ್ಟೆಯನ್ನು ಹಾಳು ಮಾಡುತ್ತಿವೆ ಎಂದು ಅವರು ಪರೋಕ್ಷವಾಗಿ ಅಮೆರಿಕದ ನೀತಿಗಳನ್ನು ಟೀಕಿಸಿದರು.

ಇತ್ತೀಚೆಗೆ ಅಮೆರಿಕ ಮತ್ತು ಮೆಕ್ಸಿಕೋದಂತಹ ದೇಶಗಳು ವಿದೇಶಿ ಸರಕುಗಳ ಮೇಲೆ ಹೆಚ್ಚಿನ ತೆರಿಗೆ ಹಾಕಲು ಮುಂದಾಗಿರುವುದರಿಂದ ಜಾಗತಿಕ ವ್ಯಾಪಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತವು ತುಂಬಾ ಎಚ್ಚರಿಕೆಯಿಂದ ಜಾಗತಿಕ ಮಾತುಕತೆಗಳನ್ನು ನಡೆಸಬೇಕಿದೆ ಮತ್ತು ನಮ್ಮ ದೇಶದ ಆರ್ಥಿಕ ಬಲವೇ ನಮಗೆ ಶ್ರೀರಕ್ಷೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!