Monday, August 4, 2025
!-- afp header code starts here -->
Homeವಿಶೇಷನನಗೆ ಈಗ ಪ್ರೀತಿಸುತ್ತಿರುವ ಹುಡುಗ ಬೇಡ, IAS ಆಫೀಸರ್ ಸಿಗೋ ಹಾಗೇ ಮಾಡು: ಬೆಂಗಳೂರಿನ ಬನಶಂಕರಿದೇವಿಗೆ...

ನನಗೆ ಈಗ ಪ್ರೀತಿಸುತ್ತಿರುವ ಹುಡುಗ ಬೇಡ, IAS ಆಫೀಸರ್ ಸಿಗೋ ಹಾಗೇ ಮಾಡು: ಬೆಂಗಳೂರಿನ ಬನಶಂಕರಿದೇವಿಗೆ ಪತ್ರದ ಮೂಲಕ ಯುವತಿಯ ವಿಚಿತ್ರ ಮನವಿ

ಬೆಂಗಳೂರು; ನನಗೆ ಈಗ ಪ್ರೀತಿಸುತ್ತಿರುವ ಹುಡುಗ ಬೇಡ, IAS ಆಫೀಸರ್ ಸಿಗೋ ಹಾಗೇ ಮಾಡು ಎಂದು ಯುವತಿಯೊಬ್ಬಳು ಬೆಂಗಳೂರಿನ ಬನಶಂಕರಿ ದೇವಿಗೆ ಪತ್ರದ ಮೂಲಕ ವಿಚಿತ್ರ ಮನವಿ ಮಾಡಿಕೊಂಡ ಘಟನೆ ನಡೆದಿದ್ದು ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪತ್ರದಲ್ಲಿ ಏನು ಬರೆದಿದ್ದಾಳೆ ಯುವತಿ?
“ಅಮ್ಮ ನಾನು ತಪ್ಪು ಮಾಡಿದೀನಿ ಕ್ಷಮಿಸಿ, ಹಿಂದೆ ಪತ್ರ  ಬರೆದಾಗ ನಾನು ಗೋಪಿನಾಥ್ ಬಿಟ್ರೆ ಯಾರನ್ನೂ ಬೇರೆ ಯಾರನ್ನೂ ಮದುವೆಯಾಗದಂತೆ ಆಗದಂತೆ ಬಯಸಿದ್ದೆ. ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷ ಅಂದರೆ 2024ರಲ್ಲಿ ನನ್ನ ಮದುವೆ ಆಗುವಂತೆ ಮಾಡು. ಒಳ್ಳೆಯ ಹೆಸರು, ಕೀರ್ತಿ, ಹೃದಯವಂತ, ಗುಣವಂತ, ಸಿರಿವಂತ, ಐಶ್ವರ್ಯವಂತ ಹುಡುಗ ಆಗಿರಬೇಕು, ಯಾವ ಹೀರೋಗೂ ಕಡಿಮೆ ಇರಬಾರದು. ಅಷ್ಟು ಚೆನ್ನಾಗಿರೋ ಒಳ್ಳೆಯ ಐಎಎಸ್ ಅಧಿಕಾರಿ ಜೊತೆ ನನ್ನ ಮದುವೆ ಮಾಡಿಸು. ನನ್ನ ಗಂಡ ಬೇರೆ ಯಾವ ಹೆಂಗಸರನ್ನು, ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು, ನನ್ನನ್ನ ಹೆಚ್ಚಾಗಿ ಪ್ರೀತಿ ಮಾಡಬೇಕು. ನಾನಂದ್ರೆ ಅವರಿಗೆ ಜೀವ ಆಗಿರಬೇಕು. ನನಗೆ ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕಿದ ಅಂತ ಆಡಿಕೊಳ್ಳೋರ ಬಾಯಿ ಮುಚ್ಚಿಸಬೇಕು ಅಂತಾ ಹುಡುಗ ಕೊಡು ಎಂದು ಬೇಡಿಕೊಂಡಿದ್ದಾಳೆ.

ಅಂದ್ಹಾಗೆ ಈ ಹಿಂದೆ ಇದೇ ರೀತಿ ದೇವರಿಗೆ ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಳು. ಅದರಲ್ಲಿ ತಾನು ಪ್ರೀತಿಸುತ್ತಿದ್ದ ಹುಡುಗ ಬೇಕು ಎಂದಿದ್ದಳು. ಆದರೆ ಈಗ ಆ ಹುಡುಗ ಬೇಡ ಐಎಎಸ್ ಆಫೀಸರ್ ಜೊತೆ ಮದುವೆ ಮಾಡಿಸು ಎಂದು ಪತ್ರ ಬರೆದಿದ್ದಾಳೆ.2023 ಡಿಸೆಂಬರ್ ನಲ್ಲಿ ಯುವತಿ ಬರೆದು ಹುಂಡಿಗೆ ಹಾಕಿದ್ದು ಮೊನ್ನೆ ಹುಂಡಿ ಎಣಿಕೆ ವೇಳೆ ಪತ್ರ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!