ಮೂಡಿಗೆರೆ:ರಸ್ತೆ ಅಪಘಾತದಲ್ಲಿ ಆಟೋ ಚಾಲಕ ಮಂಜುನಾಥ್ ಸಾವನ್ನಪ್ಪಿದ್ದು ಈ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಪರಿಹಾರ ನೀಡುವಂತೆ ಬಿಜೆಪಿ ಯುವ ಮುಖಂಡ ಪ್ರಕಾಶ್ ಕಿರಗುಂದ ಒತ್ತಾಯ ಮಾಡಿದ್ದಾರೆ.
ಹೌದು .. ಸೆಪ್ಟೆಂಬರ್ 21ರ ಸಂಜೆ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿ ಕಾರು ಹಾಗೂ ಆಟೋ ನಡುವೆ ಮುಖಮುಖಿ ಡಿಕ್ಕಿಯಾಗಿ ಆಟೋ ಚಾಲಕ ಮಂಜುನಾಥ್ ಸಾವನಪ್ಪಿದ್ದು. ಹೀಗಾಗಿ ಅವರ ಕುಟುಂಬಕ್ಕೆ ಪರಿಹಾರ ಘೋಷಿಸುವಂತೆ ಬಿಜೆಪಿ ಯುವ ಮುಖಂಡ ಪ್ರಕಾಶ್ ಕಿರಗುಂದ ಒತ್ತಾಯಿಸಿದ್ದಾರೆ.
ಹಾಗೆ ಈ ಕುಟುಂಬಕ್ಕೆ ಆಧಾರ ಸ್ಥಂಬವಾಗಿದ್ದ ಮಂಜುನಾಥ ಅವರ ಮರಣದಿಂದಾಗಿ ಪತ್ನಿ ಹಾಗೂ ಮಕ್ಕಳು ಇಡೀ ಕುಟುಂಬ ಜೀವನ ನಡೆಸಲು ಕಷ್ಟವಾಗಿದೆ.. ಈ ಹಿನ್ನಲೆ ಸರ್ಕಾರ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ
