ಚಿಕ್ಕಮಗಳೂರು: ಅತ್ಯಾಧುನಿಕ ಮತ್ತು ಆಕರ್ಷಕವಾದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣ ಮಾಡಿ ಮಹಾತ್ಮ ಗಾಂಧಿ ಜಯಂತಿ ದಿನವೇ ಅರ್ಪಿಸುತ್ತಿರುವುದು ವಿಶೇಷ.

ಬ್ರಿಗೇಡ್ ಗ್ರೂಪ್ ನವರು ಹೊಸಮನೆ ಸರ್ಕಲ್ ನಲ್ಲಿ 8.000 ಚದುರ ಅಡಿ ಜಾಗದಲ್ಲಿ ಹದಿನೈದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಪ್ರತಿಷ್ಟಾಪನೆ ಮಾಡುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ಮಾರಕದ ಹಿಂಬದಿಯ ಗೋಡೆಯಲ್ಲಿ ನೂಲುವ ಚರಕ ಹಿಡಿದಿರುವ ಮಹಾತ್ಮ ಗಾಂಧಿಜೀಯವರ ಚಿತ್ರ ಕಲ್ಲುಗಳಿಂದ ಅಳವಡಿಸಲಾಗಿದ್ದು ಕಂಬಗಳ ಮೇಲೆ ಕೂಡ ಅಂಬೇಡ್ಕರ್ ಮತ್ತು ಗಾಂಧಿಜೀ ಚಿತ್ರಗಳಿವೆ.
ಬೆಲೆ ಬಾಳುವ ಕಲ್ಲುಗಳಿಂದ ಇಡೀ ಸ್ಮಾರಕ ನಿರ್ಮಿಸಿರುವುದು ಸುತ್ತಲೂ ಕಲ್ಲು ಹಾಸು ಒದಿಸುವುದರ ಜೊತೆಗೆ ಸುತ್ತ ಮುತ್ತಲಿನ ರಸ್ತೆಗಳಿಗೆ ಟಾರ್ ಹಾಕಿಸಲಾಗಿದೆ. ಝಗ ಮಗಿಸುವ ಬೆಳಕಿನ ಚಿತ್ತಾರ ಮತ್ತು ” ಟವರ್ ಕ್ಲಾಕ್ ” ಜನರ ಮನ ಸೆಳೆಯುವುದು ಖಚಿತ.ಇದರ ಜೊತೆಗೆ ಉತ್ತಮ ಕೆಫೆ ಕೂಡ ಇರುತ್ತದೆ ಎನ್ನಲಾಗಿದೆ.

ಕಳೆದ ಒಂಬತ್ತು ತಿಂಗಳಿಂದ ನೂರಾರು ಕೆಲಸಗಾರರು ,ಪರಿಣಿತರು ಮತ್ತು ಇಂಜಿನಿಯರ್ ಗಳು ಕೆಲಸ ಮಾಡಿದ್ದಾರೆ. ಚಿಕ್ಕಮಗಳೂರು ಜನರಷ್ಟೇ ಅಲ್ಲ ಪ್ರವಾಸಿಗರು ಬಂದು ಹೋಗುವಂತಹ ತಾಣವಾಗುವುದರಲ್ಲಿ ಅನುಮಾನವಿಲ್ಲಾ.
ಅಪಕರ್ಷಕ ವಿಶೇಷ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣ ಮಾಡಿರುವ ಬ್ರಿಗೇಡ್ ಗ್ರೂಪ್ ಮಾಲೀಕರು ಜಿಲ್ಲೆಗೆ ನೀಡಿರುವ ಕೊಡುಗೆಯನ್ನು ಮುಕ್ತವಾಗಿ ಶ್ಲಾಘಸಿ ಸದಾಭಿನಂದನೆಗಳನ್ನು ಹೇಳ ಬೇಕು.
