ಮೂಡಿಗೆರೆ: NDA ಅಭ್ಯರ್ಥಿಗಳನ್ನು ಬೆಂಬಲಿಸಿ ಬಿಜೆಪಿ ಕಛೇರಿ ಪಂಚಾವಟಿ ವಿವಿಧ ಮೋರ್ಚಾ ಸಭೆ ಕರೆಯಲಾಯಿತು.ಸಭೆಯ ನೇತೃತ್ವ ವಹಿಸಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಯುತ ಗಜೇಂದ್ರ ಟಿ ಎಂ ಮಾತನಾಡಿ ಎಲ್ಲಾ ಮೋರ್ಚಾಗಳು TAPCMS ಚುನಾವಣೆಯಲ್ಲಿ NDA ಅಭ್ಯರ್ಥಿಗಳ ಪರವಾಗಿ ಮಾಡಬೇಕಾದ ಚುನಾವಣೆ ಕೆಲಸದ ಬಗ್ಗೆ ವಿವರಿಸಿದರು
ಜೆ ಎಸ್ ರಘು ಮಾತನಾಡಿ ಈ ಚುನಾವಣೆಯಲ್ಲಿ ಮೋರ್ಚಾಗಳ ಪದಾಧಿಕಾರಿಗಳ ಜವಾಬ್ದಾರಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ ಎಲ್ಲಾ ಅಭ್ಯರ್ಥಿ ಗಳನ್ನು ಗೆಲ್ಲಿಸುವ ಸಲುವಾಗಿ ಹೆಚ್ಚಿನ ಶ್ರಮವಹಿಸಬೇಕೆಂದು ಹೇಳಿದರು.
ಈ ಸಭೆಯಲ್ಲಿ ಜೆಡಿಎಸ್ ಅಧ್ಯಕ್ಷರಾದ ಲಕ್ಷ್ಮಣ್ ಗೌಡರು ಮತ್ತು ಬಿಜೆಪಿ ಮುಖಂಡರಾದ ವಿ ಕೆ ಶಿವೇಗೌಡ್ರು, ದಿಶಾ ಕಮಿಟಿ ಸದಸ್ಯರಾದ ಮನೋಜ್ ಹಳೆಕೋಟೆ, ಒಬಿಸಿ ಮೋರ್ಚಾ ಅಧ್ಯಕ್ಷರಾದ ರವಿ ಒಡೆಯರ್, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ತಾರೇಶ್ ಜೆನುಬೈಲ್, ಎಸ್ ಸಿ ಮೋರ್ಚಾ ಅಧ್ಯಕ್ಷ ಸಚಿನ್ ಬಾನಳ್ಳಿ, ಸಾಮಾಜಿಕ ಜಾಲತಾಣ ಸಂಚಾಲಕರಾದ ಸುನಿಲ್ ಮಣ್ಣಿಕೆರೆ, ಮುಖಂಡರಾದ ಓ ಜಿ ರವಿ, ಸುಜಿತ್ ಹಳೇಮುಡಿಗೇರೆ ಕಸಬಾ ಹೋಬಳಿ ಅಧ್ಯಕ್ಷರ ಸಂದೀಪ್ ಕೆಲ್ಲೂರ್, ನಗರ ಅಧ್ಯಕ್ಷ ರಂಗನಾಥ ಮತ್ತಿತರರು ಉಪಸ್ಥಿತರಿದ್ದರು.
