ಶೃಂಗೇರಿ: ತಾಲೂಕಿನ ಕೆರೆಕಟ್ಟೆ ಗ್ರಾಮದ ಕೆರೆಗದ್ದೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಸೆರೆಯಾಗಿದೆ.
ಹೌದು .. ದಾಳಿಯಾದ ದಿನ ರಾತ್ರಿಯೇ ಕಾಡಾನೆ ಸೆರೆಗೆ ಸರ್ಕಾರ ಆದೇಶಿಸಿತ್ತು. ಅದರಂತೆ ಬೆಳಿಗ್ಗೆ ಘಟನಾ ಸ್ಥಳಕ್ಕೆ ಬಂದಿದ್ದ ದುಬಾರೆ ಆನೆ ಕ್ಯಾಂಪ್ ನ ಏಕಲವ್ಯ ಪ್ರಶಾಂತ್ ಅಜ್ಜಯ್ಯ ಆನೆಗಳ ತಂಡವು ಕಾಡಾನೆಯ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಸದ್ಯ ಕಾಡಾನೆಯಿಂದ ಆತಂಕಗೊಳಗಾಗಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೆ ಶಾಸಕರ ಸ್ಪಂದನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆರೆಗದ್ದೆಯಲ್ಲಿ ಹರೀಶ್, ಉಮೇಶ್ ಬಲಿಯಾಗಿದ್ದರು.
