ಸಕಲೇಶಪುರ: ಕೆಲ ಜನಪ್ರತಿನಿಧಿಗಳು ಸಮಸ್ಯೆ ಹೇಳಿಕೊಳ್ಳೋಕೆ ಸಿಗೋದೇ ಇಲ್ಲ, ಇನ್ನೂ ಕೆಲವರ ದರ್ಶನ ಆದ್ರೂ ಕಾರಿಂದ ಇಳಿಯೋದೇ ಕಡಿಮೆ. ಆದ್ರೆ ಈ ಜನಪ್ರತಿನಿಧಿ ಮಾತ್ರ ಯಾವಾಗ್ಲೂ ಜನರ ಜೊತೆಯಲ್ಲೇ ಇರುತ್ತಾರೆ. ಅಷ್ಟಕ್ಕೂ ಆ ಶಾಸಕ ಬೇರ್ಯಾರು ಅಲ್ಲ, ಸಕಲೇಶಪುರದ ಶಾಸಕ ಸಿಮೆಂಟ್ ಮಂಜು.
ಹೌದು, ಇಂದು ಕೂಡ ರೈತರ ಸಮಸ್ಯೆಯನ್ನ ಆಲಿಸಲು ಸ್ವತಃ ಬೈಕ್ ಚಾಲನೆ ಮಾಡಿಕೊಂಡು ಕಟ್ಟಾಯ ಹೋಬಳಿಯ ಕಿತ್ತಾನೆ-ಬೀಕನಹಳ್ಳಿಯ ರಸ್ತೆ ವೀಕ್ಷಣೆ ಮಾಡಿದ್ರು. ಮಳೆಗಾಲದಲ್ಲಿ ನೀರು ತುಂಬಿ ರಸ್ತೆ ಜಮೀನಿಗೆ ನುಗ್ಗುತ್ತಿದ್ದ ಲಕ್ಕ ನಾಯಕನಹಳ್ಳಿ ಕೆರೆಯ ನೀರಿನ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿ ಸೂಚಿಸಿದ್ರು.
ಮಂಡಿತನಕ ಪ್ಯಾಂಟ್ ಮಡಚಿ, ನೀರಿನಲ್ಲಿ ಇಳಿದು ರೈತರ ಸಮಸ್ಯೆ ಆಲಿಸಿದ್ರು ಸಿಮೆಂಟ್ ಮಂಜು.!
