ಕೊಪ್ಪ ಮತ್ತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಮನೆಗಳ್ಳತನ ಎಸಗುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ತಂಡವು ಯಶಸ್ವಿಯಾಗಿರುತ್ತದೆ.
ಹೌದು .. ಬಂಧಿತನಿಂದ ಸುಮಾರು 16.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ ಸಿಪಿಐ ಕೊಪ್ಪ ವೃತ್ತ ಅಬ್ದುಲ್ ಖಾದರ್, ಪಿಎಸ್ಐ ಗಳಾದ ಮಧು ಬಿ ಇ, ಶ್ರೀಧರ್ ನಾಯ್ಕ ಮತ್ತು ನೂತನ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ತಿಪ್ಪೇಶ, ಪ್ರಶಾಂತ್, ಯುವರಾಜ, ಪ್ರಕಾಶ, ಅಮಿತ್ ರೇ ಚೌಗುಲೆ ಮತ್ತು ಅಬ್ದುಲ್ ರಬ್ಬಾನಿರವರು ಕಾರ್ಯನಿರ್ವಹಿಸಿರುತ್ತಾರೆ.
