ಮೂಡಿಗೆರೆ:ಪಟ್ಟಣ ಮತ್ತು ಹಳ್ಳಿ ಭಾಗಗಳಲ್ಲಿ ಕಸದ ರಾಶಿ ತೆರವಿಗೆ ಪರಿಸರ ಸ್ವಚ್ಛತೆ ಕಾಪಾಡುವಂತೆ ಪರಿಸರ ಸ್ನೇಹಿ ಸಂಘಟನೆ ಹಸಿರು ಫೌಂಡೇಷನ್ ಸದಸ್ಯರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಹಸಿರು ಫೌಂಡೇಶನ್ ಸಂಸ್ಥಾಪಕ ರತನ್ ದೇವ್ ಊರುಬಗೆ ಮಾತನಾಡಿ
ಪ್ರತಿ ಗ್ರಾಮ ಪಂಚಾಯಿತಿ ಹಾಗೂ ಮೂಡಿಗೆರೆ ಪಟ್ಟಣ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸರಿಯಾಗಿ ನಡೆಯದೆ ಎಲ್ಲ ಭಾಗಗಳಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದ್ದೂ ಗಬ್ಬು ವಾಸನೆ ಬರುತ್ತಿದೆ , ಅಧಿಕಾರಿಗಳು ಸರಿಯಾಗಿ ಕ್ರಮ ವಹಿಸಿ ಕಸ ವಿಲೇವಾರಿ ಮಾಡುವಂತೆ ಒತ್ತಾಯಿಸಿದರು

ಈ ಸಂದರ್ಭದಲ್ಲಿ ಸಂಘಟನೆ ಉಪಾಧ್ಯಕ್ಷರಾದ ವಿನುಪ್ರಸಾದ್ ಹೆಗ್ಗುಡ್ಲು , ನಿರ್ದೇಶಕರಾದ ಶೋದನ್ ಹೊಸಕೆರೆ, ಸಚಿನ್ ದುರ್ಗದಹಳ್ಳಿ ಸೇರಿದಂತೆ ಅನೇಕರು ಹಾಜರಿದ್ದರು
