ಚಿಕ್ಕಮಗಳೂರು: ತಾಲೂಕಿನ ಖಾಂಡ್ಯ ಹೋಬಳಿ ಬಿದರೆ ಗ್ರಾಮದ ನಿವಾಸಿಗಳಾದ ರಾಮೇಗೌಡ ದೇವರಾಜೇಗೌಡ ಸುಗ್ಗಿಮಕ್ಕಿ ನಾಗರತ್ನ ಕೆರೆಮನೆ ಮನೆಯಲ್ಲಿ ಕೋಳಿ ಗೂಡಿನಲ್ಲಿ 3 ನಾಗರ ಹಾವುಗಳು ಪ್ರತ್ಯಕ್ಷವಾಗಿವೆ.
ಹೌದು .. 3 ನಾಗರ ಹಾವು ಕೋಳಿ ಗೂಡಿನಲ್ಲಿ ಪ್ರತ್ಯಕ್ಷವಾಗಿದ್ದು ಕೋಳಿ ಮೊಟ್ಟೆಗಳನ್ನ ನುಂಗಿ ಹೊರ ಬರುತ್ತಿದ್ದವು. ಈ ಸಂದರ್ಭದಲ್ಲಿ ಊರಿನ ಸ್ಥಳೀಯ ನಿವಾಸಿ ಶಶಿ ಬಿದರೆ ರೋಹಿತ್ ತಕ್ಷಣ ಬಾಳೆಹೊನ್ನೂರಿನ ಉರಗ ತಜ್ಞನಿಗೆ ಆಲ್ಬರ್ಟ್ ಗೆ ಕರೆ ಮಾಡಿ ಹಿಡಿಯಲು ಮುಂದಾಗಿದ್ದಾರೆ.ಆ ನಂತರ ಅವುಗಳನ್ನ ರಕ್ಷಣೆ ಮಾಡಿ ಎಲೆಕಲ್ಲು ಸಮೀಪದ ಕಾಡಿಗೆ ಬಿಟ್ಟಿದ್ದಾರೆ.
ಒಂದೇ ದಿನ 3 ನಾಗರಹಾವನ್ನು ಕಂಡು ಗ್ರಾಮದ ನಿವಾಸಿಗಳು ಶಾಕ್ ಆಗಿದ್ದಾರೆ. ಈ ಹಾವುಗಳನ್ನು ಬಿದರೆ ಊರಿನ ಜನ ನೋಡಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದರು.
