ಜಯಪುರ : ಜೆಸಿಐ ಎನ್ ಆರ್ ಪುರ ಜ್ವಾಲಾಮಾಲಿನಿ ಆತಿಥ್ಯದಲ್ಲಿ ವಲಯ 14ರ ಅರ್ಧ ವಾರ್ಷಿಕ ಸಮ್ಮೇಳನ ಮಡಬೂರಿನಲ್ಲಿ ನಡೆಯಿತು.
ಜೆಸಿಐ ಬಿಳಾಲುಕೊಪ್ಪದ ರಜತ ವೈಭವ ತಂಡವು ಅಧ್ಯಕ್ಷೆ ವೈಶಾಖ ಶ್ರೇಣಿಕ್ ನೇತೃತ್ವದಲ್ಲಿ 18 ಜನ ಭಾಗವಹಿಸಿ ಪ್ರಾಂತ್ಯ ಎ ಯ ಅತ್ಯುತ್ತಮ ಅಧ್ಯಕ್ಷ ಹಾಗೂ ಉತ್ತಮ ಆಫೀಸರ್ ಪ್ರಶಸ್ತಿ ಜೊತೆಗೆ 8 ಪುರಸ್ಕಾರ ಗಳನ್ನು ಪಡೆಯಿತು.
ವಲಯ ಅಧ್ಯಕ್ಷ ಪ್ರಜ್ವಲ್, ಕಾರ್ಯದರ್ಶಿ ಸುಶಾಂತ್, ಪೂರ್ವ ಅಧ್ಯಕ್ಷರಾದ ಶ್ರೇಣಿಕ್, ಶ್ರೀಕಂಠ, ಆಶಾ ಪ್ರಕಾಶ್, ಅನಿತಾ ಜಯಕುಮಾರ್, ಅಶ್ವಥ್ ಜೈನ್, ಉಪಾಧ್ಯಕ್ಷರಾದ ಗಿರೀಶ್ ಹೆಬ್ಬಾರ್, ರಂಗನಾಥ್, ಶುಭ ವಿಜಯರಂಗ, ಹೊಸ ಸದಸ್ಯರಾದ ಸೌರಭ, ಶಾಂತಿಪ್ರಸಾದ್, ಯುವ ಜೆಸಿ ಸದಸ್ಯರುಗಳಾದ ಶಾರ್ವಿಕ, ಅನಿಕೇತ್, ಶ್ರಾವಕ್ ಭಾಗವಹಿಸಿದ್ದರು.
