Thursday, June 11, 2026
Homeಜಿಲ್ಲಾಸುದ್ದಿKota Srinivas Poojary: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 18 ರಸ್ತೆಗೆ 119 ಕೋಟಿ ರೂ...

Kota Srinivas Poojary: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 18 ರಸ್ತೆಗೆ 119 ಕೋಟಿ ರೂ ಅನುದಾನ ಬಿಡುಗಡೆ!

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಒಟ್ಟು 18 ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ ಒಟ್ಟು 119 ಕೋಟಿ ರೂ. ಅನುದಾನ ರಸ್ತೆಯ ದುರಸ್ತಿ ಮತ್ತು ಅಭಿವೃದ್ಧಿಗಾಗಿ ಮಂಜೂರಾಗಿದೆ ಎಂದು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಬಾಳೆಹೊನ್ನೂರು-ಶೃಂಗೇರಿ ರಸ್ತೆಗೆ 50 ಕೋಟಿ ರೂ., ಕೊಪ್ಪ- ಜಯಪುರ- ಶೃಂಗೇರಿ ರಸ್ತೆ 6 ಕೋಟಿ ರೂ., ಕಡೂರು ತಾಲೂಕಿನ ಬೇಗೂರು ಗೇಟ್‌ನಿಂದ -ಅರೇಹಳ್ಳಿ ಮೂಲಕ ಮಚ್ಚೆರಿ ರಸ್ತೆಗೆ 6 ಕೋಟಿ, ಚಿಕ್ಕಮಗಳೂರು ತಾಲೂಕಿನ ಸೀತಾಲಯ್ಯನ ಗಿರಿ- ಮುಳ್ಳಯ್ಯನಗಿರಿ ರಸ್ತೆಗೆ 6 ಕೋಟಿ ರೂ. ಮಂಜೂರಾಗಿದೆ.

ಮೂಡಿಗೆರೆ ತಾಲೂಕಿನ ರಾಜ್ಯ ಹೆದ್ದಾರಿ 106ರ ಬಾಳೂರು ಹ್ಯಾಂಡ್ ಪೋಸ್ಟ್‌ನಿಂದ ಕಳಸ ರಸ್ತೆಗೆ 6 ಕೋಟಿ ಹಾಗೂ ತರಿಕೆರೆ ತಾಲೂಕಿನಲ್ಲಿ ರಾಜ್ಯ ಹೆದ್ದಾರಿ 57 ಬಾಗಲಕೋಟೆ- ಬಿಳಿಗಿರಂಗನ ಬೆಟ್ಟ ರಸ್ತೆಯ ಅಭಿವೃದಿಗೆ 6 ಕೋಟಿ ರೂ. ಮಂಜೂರಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!