ಬೇಲೂರು : ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ತಾಲ್ಲೂಕಿನ, ಕೆಸಗೋಡು ಗ್ರಾಮದಲ್ಲಿ ನಡೆದಿದೆ.
ಗಗನ (38) ಪತಿಯಿಂದಲೇ ಕೊಲೆಯಾದ ಗೃಹಿಣಿಯಾಗಿದ್ದು ರಘು (41) ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ
ಗಗನ ಹಳೇಬೀಡು ಹೋಬಳಿ ಸಾಣೇನಹಳ್ಳಿ ಗ್ರಾಮದವರಾಗಿದ್ದು ರಘು ಬಿಕ್ಕೋಡು ಹೋಬಳಿ ಕೆಸಗೋಡು ಗ್ರಾಮದವರು 13 ವರ್ಷಗಳ ಹಿಂದೆ ವಿವಾಹವಾಗಿದ್ದು ದಂಪತಿಗೆ 12 ವರ್ಷದ ಹಾಗೂ 6 ವರ್ಷದ ಗಂಡು ಮಕ್ಕಳಿದ್ದರು.ಚಿಕ್ಕಮಗಳೂರಿನಲ್ಲಿ ಬೇಕರಿ ಇಟ್ಟುಕೊಂಡಿದ್ದ ದಂಪತಿ ಎಂಎಲ್ಸಿ ಸಿ.ಟಿ.ರವಿ ಮನೆಯ ಹಿಂಭಾಗ ವಾಸವಿದ್ದರು.
ಶುಕ್ರವಾರ ಮಧ್ಯಾಹ್ನ ಕಾರಿನಲ್ಲಿ ಪತ್ನಿ ಜೊತೆ ಕೆಸಗೋಡು ಗ್ರಾಮಕ್ಕೆ ಹೊರಟಿದ್ದ ರಘು ರಸ್ತೆ ಮಧ್ಯದಲ್ಲಿ ಕೊಲೆ ಮಾಡಿರುವುದಾಗಿ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಪತಿ ನಿನ್ನೆ ಸಂಜೆ 6.30 ಕ್ಕೆ ಕೆಸಗೋಡು ಗ್ರಾಮಕ್ಕೆ ಬಂದಿರುವ ರಘು ನಂತರ ತನ್ನ ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿ ಪತ್ನಿಯನ್ನು ಕೊಂದಿರುವುದಾಗಿ ಹೇಳಿದ್ದಾನೆ.
ಕಾರಿನಲ್ಲೆ ಪತ್ನಿ ಕೊಲೆ ಮಾಡಿ ಯಗಚಿ ನಾಲೆಗೆ ಶವ ಬಿಸಾಡಿರುವ ಶಂಕೆ ವ್ಯಕ್ತವಾಗಿದ್ದು ನಂತರ ಕಸೆಗೋಡು ಗ್ರಾಮಕ್ಕೆ ಬಂದು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ರಘು
ಗಗನ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿರುವ ಪೊಲೀಸರು ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.
