ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ ಕಡಿಮೆಯಾದರೂ ಅವಾಂತರೂ ಮಾತ್ರ ಕಡಿಮೆಯಾಗುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ಮಳ್ಳಯ್ಯನಗಿರಿ- ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲಿ ವಾಹನ ಚಾಲಕರು ಜಾಗೃತೆಯಿಂದ ಓಡಾಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಹೌದು .. ಚಿಕ್ಕಮಗಳೂರು ತಾಲೂಕಿನ ಚನ್ನಗೋಡನಹಳ್ಳಿ ಸಮೀಪ ಮುಳ್ಳಯ್ಯನಗಿರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪ್ರವಾಸಿಗನೊಬ್ಬನ ಮೇಲೆ ಏಕಾಏಕಿ ಮರ ಬಿದ್ದಿದ್ದು ಅದೃಷ್ಟವಶಾತ್ ಬೈಕ್ ತುದಿ ಮರ ಬಿದ್ದ ಹಿನ್ನೆಲೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.
ಮುಳ್ಳಯ್ಯನಗಿರಿ ಭಾಗದ ಕಡೆ ಹೆಚ್ಚು ಗಾಳಿ ಮಳೆ ಆಗುತ್ತಿರುವುದರಿಂದ ಮರಗಳು ಬುಡಸಮೇತ ಬೀಳುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಹಾಘೆ ಈ ಮಾರ್ಗದಲ್ಲಿ ಹಲವು ಕಡೆ ಭೂ ಕುಸಿತ ಕೂಡ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ಮಳ್ಳಯ್ಯನಗಿರಿ- ದತ್ತಪೀಠಕ್ಕೆ ಹೋಗುವ ಪ್ರವಾಸಿಗರು ಬಹಳ ಎಚ್ಚರಿಕೆಯಿಂದ ಓಡಾಡಬೇಕಿದೆ ಎಂದು ತಿಳಿಸಿಲಾಗಿದೆ.
