ಎನ್.ಆರ್.ಪುರ: ಎರಡು ಕೋಟಿ ರೂ. ಡಾಂಬಾರ್ ರಸ್ತೆ ಕೇವಲ ಎರಡೇ ದಿನಗಳಲ್ಲಿ ಢಮಾರ್ ಆಗಿರುವ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ತಾವರೇಘಟ್ಟ ಗ್ರಾಮದಲ್ಲಿ ಕಂಡುಬಂದಿದೆ.

ಕಸದ ಪೊರಕೆಯಿಂದ ಗುಡಿಸಿದ್ರೆ ರಸ್ತೆಯ ಪುಡಿ ಜಲ್ಲಿ ಕಿತ್ತಕೊಂಡು ಬರುತ್ತಿದೆ. ಸ್ಥಳಿಯ ಅಜ್ಜಿಯೊಬ್ಬರು ಪೊರಕೆಯಿಂದ ಕಸ ಗುಡಿಸಿ 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ರಸ್ತೆಯ ಗುಣಮಟ್ಟವನ್ನ ತೋರಿಸಿ ಕೊಟ್ಟಿದ್ದಾರೆ.
ಅಧಿಕಾರಿಗಳು ಮತ್ತು ತಾವರೇಘಟ್ಟ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ತಕ್ಷಣವೇ ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
