Tuesday, August 11, 2026
Homeಕ್ರೈಮ್ಹಾಸನ: ಹುಟ್ಟುಹಬ್ಬದಂದೇ ಅಪಘಾತಕ್ಕೀಡಾಗಿ ಯುವಕ ದುರ್ಮರಣ!

ಹಾಸನ: ಹುಟ್ಟುಹಬ್ಬದಂದೇ ಅಪಘಾತಕ್ಕೀಡಾಗಿ ಯುವಕ ದುರ್ಮರಣ!

Telegram Group
Join Now

ಹಾಸನ: ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಗೆ ಹುಟ್ಟುಹಬ್ಬದಂದೇ ಯುವಕ ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೌದು ..ಕೆ.ಪಿ.ಧನುಜ್(‌25) ದುರ್ಮರಣಕ್ಕೀಡಾದ ಯುವಕನಾಗಿದ್ದು , ಇಂದು ಹುಟ್ಟುಹಬ್ಬದ ನಿಮಿತ್ತ ಸಂಬಂಧಿಕರಿಗೆ, ಸ್ನೇಹಿತರಿಗೆ ಸ್ವೀಟ್‌ ಕೊಡಲು ತೆರಳಿದ್ದ ವೇಳೆ ತಡರಾತ್ರಿ ಸ್ನೇಹಿತನ ಜೊತೆ ಬೈಕ್‌ ನಲ್ಲಿ ತೆರಳುತ್ತಿದ್ದ ವೇಳೆ ಬೈಕ್‌ ಸಮೇತ ಗುಂಡಿಗೆ ಬಿದ್ದ ಯುವಕರು, ರೋಡ್‌ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆ ಸರಳುಗಳು ಚುಚ್ಚಿ ಧನುಜ್‌ ಸ್ಥಳದಲ್ಲೇ ಸಾವನ್ನಪ್ಪಿದ್ದು ಸ್ನೇಹಿತನಿಗೆ ತೀವ್ರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಪಟ್ಟಣದ ಕನಕಭವನ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದರು ಆದರೂ ಕಾಮಗಾಋಇ ನಡೆಯುತ್ತಿದೆ ಎಂದು ಸೂಚನ ಫಲಕ ಹಾಘೆ ಬ್ಯಾರೆಕೇಡ್‌ ಗಳನ್ನು ಏನೂ ಹಾಕಿರಲಿಲ್ಲ ಈ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದೆ.

ಮೃತನ ಪೋಷಕರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕರು ಸಹ ಕಿಡಿಕಾರಿದ್ದಾರೆ.

ಸ್ಥಳಕ್ಕೆ ಹೊಳೆನರಸೀಪುರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments